ಕಳಸ ಲೈವ್ ವರದಿ
ಸಂಸ್ಕøತಿ ಮಾನವನ ಜೀವನದ ತಾಯಿಬೇರು. ಮನುಷ್ಯ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಏನೆಲ್ಲಾ ಸಾದಿಸಿದ್ದರೂ, ಸಾಧನೆಯ ಮೂಲ ನೆಲದ ಸಂಸ್ಕøತಿಯೇ ಆಗಿರುತ್ತದೆ. ಸಂಸ್ಕøತಿ ಹಾಗೂ ವಿಜ್ಞಾನಗಳು ನಂಬಿಕೆ ಹಾಗೂ ಭೌತಿಕ ಸಾಕ್ಷಿಗಳ ಮೇಲೆ ನಿಂತಿದೆ. ಯುವಜನತೆ ಜಾಗತೀಕರಣದ ಭರದಲ್ಲಿ ಸಂಸ್ಕøತಿಯನ್ನು ಮರೆಯಬಾರದು ಎಂದು ಸಾಹಿತಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಮೊಗಳ್ಳಿ ಗಣೇಶ್ ಅವರು ಹೇಳಿದರು.
ಕಳಸದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ದಿನಾಂಕ 13-01-2024ರ ಶನಿವಾರದಂದು ಏರ್ಪಡಿಸಿದ್ದ ‘ಸಂಸ್ಕøತಿ ಚಿಂತನೆ’ ಎಂಬ ವಿಷಯದ ಕುರಿತಾದ ವಿಶೇಷ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ‘ಭೂಮಿಯ ಎಲ್ಲಾ ಖಂಡಗಳಲ್ಲಿ ಆದಿಮ ಸಂಸ್ಕøತಿಯ ಕುರುಹುಗಳು ದೊರೆಯುತ್ತವೆ. ಜನಪದರ ನಾಡಿಮಿಡಿತವನ್ನು ಆಯಾ ಸಂಸ್ಕøತಿಗಳು ಹಲವು ಪ್ರಕಾರಗಳಲ್ಲಿ ಕಟ್ಟಿಕೊಟ್ಟಿವೆ. ಮಾನವ ನಾಗರೀಕತೆಯ ಹಾದಿ ಹಿಡಿಯಲು ರೂಢಿಸಿಕೊಂಡ ಆಚಾರ ವಿಚಾರಗಳೇ ಸಂಸ್ಕøತಿ. ಇದು ಎಲ್ಲಾ ಮತ ಹಾಗೂ ನಾಗರೀಕತೆಗಳ ತಳಹದಿಯಾಗಿದ್ದು ಮನುಷ್ಯನನ್ನು ಯುದ್ಧದಿಂದ ವಿಮುಖಗೊಳಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಯುವಜನತೆ ನಮ್ಮ ಮೂಲ ಸಂಸ್ಕøತಿಯ ಸೊಗಡನ್ನು ಅರಿತು ಅವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಲ್ಲದೇ ಮುಂದಿನ ಪೀಳಿಗೆಗೂ ಜತನದಿಂದ ವರ್ಗಾಯಿಸಬೇಕು ಎಂದು ಅಭಿಪ್ರಾಯ ಪಟ್ಟರು.
ಕನ್ನಡ ವಿಭಾಗದ ಉಪನ್ಯಾಸಕ ಡಾ. ರಮೇಶ್ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು, ಐಕ್ಯೂಎಸಿ ಸಂಚಾಲಕರಾದ ಡಾ. ಅದಿತ್ಯ ಆಡಿಗ ಸ್ವಾಗತಿಸಿದರು. ಶ್ರೀ ಶಿವಣ್ಣ ವಂದಿಸಿದರು, ವಿದ್ಯಾರ್ಥಿನಿಯರಾದ ಪ್ರಗತಿ ನಿರೂಪಿಸಿದರು, ಪ್ರಿಯಾ ಪ್ರಾರ್ಥಿಸಿದರು, ತೃಪ್ತಿ ವ್ಯಕ್ತಿ ಪರಿಚಯ ಮಾಡಿಕೊಟ್ಟರು ಐಟಿ ಸಂಚಾಲಕರಾದ ಶ್ರೀಮತಿ ನಿವೇದಿತಾ ಕಾರ್ಯಕ್ರಮದ ತಾಂತ್ರಿಕ ವ್ಯವಸ್ಥೆಯನ್ನು ನಿರ್ವಹಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ವಿನಯ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸುಮಾರು 200ರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.