ಕಳಸ ಲೈವ್ ವರದಿ
ಕಳಸ ಜೆಸಿಐ ಸಂಸ್ಥೆ ಆಯೋಜಿಸಿದ್ದ ಆನ್ ಲೈನ್ ಭಾಷಣ ಸ್ಪರ್ಧೆಯಲ್ಲಿ ಜೆಇಎಂ ಶಾಲೆಯ ಕು|| ಧನ್ಯ ಜಿ ಗೌಡ (ಪ್ರಥಮ), ಹೊರನಾಡು ಸರ್ಕಾರಿ ಪ್ರೌಢ ಶಾಲೆಯ ಕು|| ಪ್ರಾಪ್ತಿ (ದ್ವಿತೀಯ), ಹಿರೇಬೈಲು ಸೇಕ್ರೇಟ್ ಹಾರ್ಟ್ ಪ್ರೌಢ ಶಾಲೆಯ ಕು|| ಸಾತ್ವಿಕ್ (ತೃತೀಯ) ಸ್ಥಾನವನ್ನು ಪಡೆದಿದ್ದಾರೆ.
ರಾಷ್ಟ್ರೀಯ ಯುವ ದಿನಾಚರಣೆಯ ಅಂಗವಾಗಿ ಜನವರಿ 12ರಂದು ಸಮೃದ್ಧ ಭಾರತ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಎಂಬು ವಿಷಯದಡಿಯಲ್ಲಿ ಆನ್ ಲೈನ್ ಭಾಷಣ ಸ್ಪರ್ಧೆಯನ್ನು ಏರ್ಪಡಿಲಾಗಿತ್ತು.
ಒಟ್ಟು 32 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಅಂತಿಮವಾಗಿ ಜೆಇಎಂ ಶಾಲೆಯ ಕು|| ಧನ್ಯ ಜಿ ಗೌಡ ಪ್ರಥಮ, ಹೊರನಾಡು ಸರ್ಕಾರಿ ಪ್ರೌಢ ಶಾಲೆಯ ಕು|| ಪ್ರಾಪ್ತಿ ದ್ವಿತೀಯ , ಹಿರೇಬೈಲು ಸೇಕ್ರೇಟ್ ಹಾರ್ಟ್ ಪ್ರೌಢ ಶಾಲೆಯ ಕು|| ಸಾತ್ವಿಕ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ ಜೆಇಎಂ ಶಾಲೆಯ ಕು|| ಅಶೆಲ್ ತಾವ್ರೊ ಇವರನ್ನು ವಿಶೇಷ ಭಾಗವಹಿಸುವಿಕೆಯಾಗಿ ಗುರುತಿಸಲಾಗಿದೆ.
ಬಹುಮಾನವನ್ನು ಜನವರಿ 28ರಂದು ನಡೆಯುವ ಜೆಸಿಐ ಪದಗ್ರಹಣ ಕಾರ್ಯಕ್ರಮದಲ್ಲಿ ನೀಡಲಾಗುವುದು ಅಲ್ಲದೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜೆಸಿಐ ಭಾರತ ನಡೆಸುವ ಪರಿಣಾಮಕಾರಿ ಭಾಷಣ ತರಬೇತಿಗೆ ಉಚಿತ ಪ್ರವೇಶವನ್ನು ನೀಡಲಾಗುವುದು ಎಂದು ಕಳಸ ಜೆಸಿಐ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.