ಕಳಸ ಲೈವ್ ವರದಿ
ಕಳಸ ಕಲಶೇಶ್ವರ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಹೆಚ್.ಎಸ್. ಅನಂತ ಪದ್ಮನಾಭ ಭಟ್ ಗೆ ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನ ಬೆಂಗಳೂರು ಇವರು ಕರ್ನಾಟಕ ವಿದ್ಯಾವಿಭೂಷಣ ಎಂಬ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಭಾನುವಾರ ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದ ಆವರಣದಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕøತಿಕ ಪ್ರತಿಷ್ಠಾನದ ವತಿಯಿಂದ ನಡೆದ ಕರ್ನಾಟಕ ಸುವರ್ಣ ಸಂಭ್ರಮ 50 ಮತ್ತು ಕನ್ನಡಿಗರ ಸಾರ್ವಭೌಮತ್ವ ಕುರಿತು ವಿಚಾರ ಸಂಕಿರಣ ಹಾಗೂ ರಾಷ್ಟ್ರೀಯ ಸುಪುತ್ರ ರಾಷ್ಟ್ರೀಯ ಸುಪುತ್ರಿ ವಿಶೇಷ ಪ್ರಶಸ್ತಿ ಮತ್ತು ನಾಡಿನ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಅನಂತ ಪದ್ಮನಾಭ ಭಟ್ 1984ರಲ್ಲಿ ಶೃಂಗೇರಿ ಶ್ರೀ ಮಠದಲ್ಲಿ ವೇದಾಧ್ಯಯಣ ಮಾಡಿ ನಂತರ ತಮಿಳುನಾಡಿ ಶ್ರೀಪುರದ ಶ್ರೀ ಶಾರದಾಂಬೆಯ ಅರ್ಚಕನಾಗಿ 7 ವರ್ಷ ಸೇವೆ ಸಲ್ಲಿಸಿದ್ದರು.ನಂತರ ತೀರ್ಥಹಳ್ಳಿ ಮಹಾಹೃಷಿ ವೇದ ವಿಜ್ಞಾನ ವಿದ್ಯಾಪೀಠದಲ್ಲಿ ಹಾಗೂ ತೀರ್ಥಮುತ್ತೂರಿನ ವಿದ್ಯಾಪೀಠದಲ್ಲಿ,ದಾವನಗೆರೆಯ ಪುಣ್ಯ ಸ್ಥಳ ಎಂಬಲ್ಲಿ, ಉತ್ತರ ಕರ್ನಾಟಕದ ನೆಲಮಾವು ಮಠದಲ್ಲಿ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು.ಶ್ರೀರಂಗಪಟ್ಟಣದಲ್ಲಿ ಸರ್ವದ್ಬುತ ಶಾಂತಿ ಹೋಮವನ್ನು ಒಂದು ತಿಂಗಳ ಕಾಲ ಮಾಡಿದ್ದರು.
ಇವರ ಧಾರ್ಮಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ.