ಕಳಸ ಲೈವ್ ವರದಿ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಕ್ರಮ ಸಮಿತಿಗೆ ಮರಸಣಿಗೆ ಗ್ರಾಮ ಪಂಚಾಯಿತಿ ಸದಸ್ಯ ಮರಸಣಿಗೆ ವಿಶ್ವನಾಥ್ ಆವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಅಧಿಕಾರವನ್ನು ಚಲಾಯಿಸಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ರಚಿಸಲಾಗಿದೆ.
ಇದರ ಅಧ್ಯಕ್ಷರಾಗಿ ಮೂಡಿಗೆರೆ ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ, ಕಾರ್ಯದರ್ಶಿ ಆಯಾ ಕ್ಷೇತ್ರ ತಹಶೀಲ್ದಾರ್ ಆಗಿರುತ್ತಾರೆ.ಸದಸ್ಯರಾಗಿ ಮರಸಣಿಗೆ ವಿಶ್ವನಾಥ್, ಮಾಗಡಿ ಹ್ಯಾಂಡ್ ಪೋಸ್ಟ್ ಮರ್ಲೆಯ ಶ್ರೀಮತಿ ಪ್ರೇಮ, ಫಲ್ಗುಣಿಯ ಹರೀಶ್ರವರು ಈ ಸಮಿತಿಯಲ್ಲಿ ಇರಲಿದ್ದಾರೆ.
ಮರಸಣಿಗೆ ವಿಶ್ವನಾಥ್ ಕಳಸ ಬ್ಲಾಕ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮರಸಣಿಗೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರಾಗಿ ಪ್ರಸ್ತುತ ಸದಸ್ಯರಾಗಿದ್ದಾರೆ.ಊರಿನ ಅಭಿವೃದ್ಧಿ ಕಾರ್ಯದಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದು, ಜನ ಸಾಮಾಣ್ಯರಿಗೆ ಸಾಕಷ್ಟು ಹತ್ತಿರವಾಗಿದ್ದು, ಬಡವರ ಬಗ್ಗೆ ಸಾಕಷ್ಟು ಕಾಲಾಜಿ ಇರುವ ಇವರು ಬಗರ್ ಹುಕುಂ ಸಕ್ರಮ ಸಮಿತಿಗೆ ಸದಸ್ಯರಾಗಿರುವುದು ಸಾಮಾಣ್ಯ ಜನರು ಹಲವು ವರ್ಷಗಳಿಂದ ಹಣ ಕೊಡಲು ಸಾಧ್ಯವಾಗದೆ ಉಳಿದ ಜಾಗದ ಸಾಗುವಳಿ ಚೀಟಿ ಸಿಗುವ ಆಶಾಭಾವನೆ ಹೊಂದಿದ್ದಾರೆ.
ಈ ಬಗ್ಗೆ ಕಳಸ ಲೈವ್ ಜೊತೆ ಮಾತನಾಡಿದ ಮರಸಣಿಗೆ ವಿಶ್ವನಾಥ್ ಉಳ್ಳವರು ಹಣಕೊಟ್ಟಾದರೂ ತಮ್ಮ ಭೂಮಿಯ ಸಾಗುವಳಿ ಚೀಟಿ ಮಾಡಿಕೊಂಡಿದ್ದಾರೆ.ಆದರೆ ಕಳಸ ತಾಲೂಕಿನಲ್ಲಿ ಅದೆಷ್ಟೋ ವರ್ಷಗಳಿಂದ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಲಂಚಕೊಡಲು ಸಾಧ್ಯವಾಗದೆ ತಮ್ಮ ಜಮೀನಿಗೆ ಸಾಗುವಳಿ ಚೀಟಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.ಅಂತವರನ್ನು ಹುಡುಕಿ ಅವರಿಗೆ ಕಾನೂನು ರೀತಿ ಸಾಗುವಳಿ ಚೀಟಿ ಮಾಡಿಕೊಡಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಒಟ್ನಲ್ಲಿ ಕಳಸ ತಾಲೂಕಿನಲ್ಲಿ ಒಬ್ಬ ಅರ್ಹ ವ್ಯಕ್ತಿಯನ್ನು ಸಮಿತಿಯ ಸದಸ್ಯನನ್ನಾಗಿ ಮಾಡಿರುವುದಕ್ಕೆ ಕಳಸದ ಜನತೆ ಸಂತಸ ವ್ಯಕ್ತಡಿಸಿದ್ದಾರೆ.
Related Stories
September 6, 2024