ಕಳಸ ಲೈವ್ ವರದಿ
ಕಳಸ ಪಟ್ಟಣದಲ್ಲಿ ಗೌಡ್ರು ಡಾಕ್ಟ್ರು ಎಂದೆ ಪ್ರಸಿದ್ದಿಯಾಗಿದ್ದ ಬಡವರ ಪಾಲಿನ ವೈದ್ಯ ಹೇಮಚಂದ್ರ ಪ್ರಸಾದ್ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಮಂಗಳವಾರ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.ಕೂಡಲೇ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.
ಡಾ.ಹೇಮಚಂದ್ರ ಪ್ರಸಾದ್ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು.ಜನ ಸಾಮಾನ್ಯರ ಪಾಲಿಗೆ ಅವರೊಬ್ಬ ಕೈಗೆಟುಕುವ ವೈದ್ಯರಾಗಿ ಹಲವು ದಶಕಗಳ ಸೇವೆ ನೀಡಿ ಜನಜನಿತರಾಗಿದ್ದರು. ಇಂದಿಗೂ ತನ್ನ ವೃತ್ತಿಯಲ್ಲಿ ನಿಗದಿತ ಶುಲ್ಕವನ್ನು ಪಡೆಯುತ್ತಿದ್ದ ಇವರು ಜನ ಮನ್ನಣೆಯನ್ನು ಪಡೆದಿದ್ದರು.ಬಡ ಜನರು ತನ್ನ ಕಿಸೆಯಲ್ಲಿ ಹಣವಿಲ್ಲದಿದ್ದರೂ ಕೂಡ ದೈರ್ಯವಾಗಿ ಅವರ ಬಳಿ ಹೋಗಿ ಚಿಕಿತ್ಸೆ ಪಡೆಯಬಹುದಾಗಿತ್ತು. ಇಂತಹ ಅಪರೂಪದ ವೈದ್ಯರನ್ನು ಕಳೆದುಕೊಂಡಿದ್ದ ಕಳಸ ತಾಲೂಕಿನ ಜನತೆಗೆ ತುಂಬಲಾರದ ನಷ್ಟವಾಗಿದೆ.
ವೈದ್ಯರು ಮೃತರಾಗಿದ್ದಾರೆ ಎಂದು ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಜನ ಕಂಬನಿ ಮಿಡಿದಿದ್ದಾರೆ..
Related Stories
September 6, 2024