ಕಳಸ ಲೈವ್ ವರದಿ
ದತ್ತಾತ್ರೇಯ ಪೀಠದಲ್ಲಿ 10 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಕಳಸದಲ್ಲಿ ಭಾನುವಾರ ದತ್ತಮಾಲಾ ಅಭಿಯಾನದೊಂದಿಗೆ ಅಧಿಕೃತ ಚಾಲನೆ ದೊರೆತಿದೆ.
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದ ದತ್ತಜಯಂತಿಗೆ ಕಳಸದಲ್ಲಿ ಬಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕ ಅಜಿತ್, ಬಜರಂಗದಳ ಕಳಸ ತಾಲೂಕು ಸಂಯೋಜಕ ಸಂತೋಷ್ ಬೆಟ್ಟಿಗೆರಿ ಸೇರಿದಂತೆ 20ಕ್ಕೂ ಹೆಚ್ಚು ಭಕ್ತರು ಮಾಲೆ ಧರಿಸಿದರು.
ದತ್ತ ಜಯಂತಿ ಉತ್ಸವದ ಅಂಗವಾಗಿ ಕಳಸದಲ್ಲಿ ಬೃಹತ್ ಶೋಭಾ ಯಾತ್ರೆ ಡಿಸೆಂಬರ್ 23ರ ಶನಿವಾರದಂದು ನಡೆಯಲಿದೆ.ಅಂದು ಸಂಜೆ 3 ಗಂಟೆಗೆ ಕಳಸ ವೆಂಕಟರಮಣ ದೇವಸ್ಥಾನದ ಬಳಿಯಿಂದ ಬೃಹತ್ ಶೋಭಾ ಯಾತ್ರೆಯು ನಡೆಯಲಿದ್ದು, ಕಳಸ ಮುಖ್ಯ ರಸ್ತೆಯ ಮುಖಾಂತರ ಕಲಶೇಶ್ವರ ದೇವಸ್ಥಾನದವರೆಗೆ ಸಾಗಿ ನಂತರ ಗಿರಿಜಾಂಬ ದೇವಸ್ಥಾನ ದುರ್ಗಾ ಮಂಟಪದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಶೋಭಯಾತ್ರೆಯಲ್ಲಿ ನೃತ್ಯ ಭಜನಾ ಕಾರ್ಯಕ್ರಮ, ವಿಶಿಷ್ಟ ಟ್ಯಾಬ್ಲೋ ಪ್ರದರ್ಶನ, ನಾಸಿಕ್ ಡೋಲ್ ಮೆರುಗು ನೀಡಲಿವೆ.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಜ್ರದೇಹಿ ಗುರುಪುರ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬಜರಂಗದಳ ದಕ್ಷಿಣ ಪ್ರಾಂತದ ಸಹಸಂಯೋಜಕ ಪ್ರಬಂಜನ್, ಬಜರಂಗದಳ ಶೃಂಗೇರಿ ಜಿಲ್ಲಾ ಕಾರ್ಯದರ್ಶಿ ದಿವಿರ್ ಮಲ್ನಾಡ್, ವಿಶ್ವಹಿಂದೂ ಪರಿಷತ್ ಕಳಸ ಪ್ರಖಂಡ ಅಧ್ಯಕ್ಷ ಬಾಲಕೃಷ್ಣ ಪ್ರಭು, ಬಜರಂಗದಳ ಶೃಂಗÉೀರಿ ಜಿಲ್ಲಾ ಸಂಯೋಜಕ ಅಜಿತ್, ಬಜರಂಗದಳ ಕಳಸ ತಾಲೂಕು ಸಂಯೋಜಕ ಸಂತೋಷ್ ಬೆಟ್ಟಿಗೆರಿ ಇವರು ಭಾಗವಹಿಸಲಿದ್ದಾರೆ.
Related Stories
September 6, 2024