ಕಳಸ ಲೈವ್ ವರದಿ
ಇಸ್ರೋ ವಿಜ್ಞಾನಿ ಶ್ರೀನಾಥ ರತ್ನ ಕುಮಾರ್ ಅವರಿಂದ ಚಂದ್ರಯಾನ ಮತ್ತು ಆದಿತ್ಯ ಎಲ್ 1 ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಡಿ 16 ರಂದು ಕಳಸ ಕೆ.ಪಿ.ಎಸ್ ನಲ್ಲಿ ನಡೆಯಲಿದೆ.
ಅಟಲ್ ಟಿಂಕರಿಂಗ್ ಲ್ಯಾಬ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಕಳಸ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಘಟಕ ಕಳಸ ಇವರ ಸಂಯುಕ್ತಾಶ್ರಯದಲ್ಲಿ ಡಿ 16 ರಂದು ಬೆಳಿಗ್ಗೆ 9.30ಗೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಪಿ.ಎಸ್ನ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಹಮ್ಮದ್ ರಫೀಕ್ ವಹಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಕಳಕೋಡು ಕೆ.ಸಿ.ಧರಣೇಂದ್ರ, ಕೆ.ಕೆ.ಬಿ ಬಸ್ಸು ಮಾಲಿಕರಾದ ಕೆ.ಕೆ.ಬಾಲಕೃಷ್ಣ ಭಟ್, ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ್ ರಾಜ್, ಜಿಲ್ಲಾ ಎ.ಟಿ.ಎಲ್ ನೋಡಲ್ ಅಧಿಕಾರಿ ಭಾಗೀಬಾಯಿ ಡಿ.ಆರ್, ಕೆ.ಜೆ.ವಿ.ಎಸ್ ಜಿಲ್ಲಾಧ್ಯಕ್ಷ ಮುಗುಳಿಕಟ್ಟೆ ಲೋಕೇಶ್, ಮಲ್ನಾಡ್ ಶರೀಫ್, ಕೆ.ಜೆ.ವಿ.ಎಸ್ ಕಳಸ ಘಟಕ ಅಧ್ಯಕ್ಷ ಗಣೇಶ್ ಕುಕ್ಕೂಡು ಇರಲಿದ್ದಾರೆ.
Related Stories
September 6, 2024