ಕಳಸ ಲೈವ್ ವರದಿ
ಮೂಡಿಗೆರೆ ಬಿದರಹಳ್ಳಿ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಬೀಡಾಡಿ ಜಾನುವಾರೊಂದಕ್ಕೆ ಶನಿವಾರ ಬೈಕ್ ಡಿಕ್ಕಿ ಹೊಡೆದು ಸವಾರ ವಿಶ್ವೇಂದ್ರ ರಾವ್ (42) ಎಂಬುವವರು ರಸ್ತೆಗೆ ಬಿದ್ದಾಗ ಎದುರಿನಿಂದ ಬಂದ ಗ್ಯಾಸ್ ಸಿಲಿಂಡರ್ ತುಂಬಿದ ಲಾರಿ ಬೈಕ್ ಸವಾರನ ಮೈಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕಿನಲ್ಲಿದ್ದ ಮಹಿಳೆ ಲಕ್ಷ್ಮಿ (38) ಗಂಭೀರ ಗಾಯಗೊಂಡಿದ್ದಾರೆ.
ಧರ್ಮಸ್ಥಳಕ್ಕೆ ತೆರಳಿದ್ದ ಕೊಪ್ಪ ತಾಲೂಕಿನ ಕಲ್ಕೆರೆ ಗ್ರಾಮದ ವಿಶ್ವೇಂದ್ರರಾವ್ ಪೂಜೆ ಮುಗಿಸಿ ಊರಿಗೆ ಮರಳುವ ವೇಳೆ ಅದೆ ಗ್ರಾಮದ ಪರಿಚಿತ ಮಹಿಳೆಯನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹೊರಟಿದ್ದಾರೆ. ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದ ಬಸ್ ಡಿಪೋ ಎದುರು ಹೆದ್ದಾರಿಯಲ್ಲಿ ಬೀಡಾಡಿ ಜಾನುವಾರು ನಿಂತಿದ್ದು ಕತ್ತಲಾಗಿದ್ದರಿಂದ ಕಾಣದೆ ದನಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಅದೇ ರಸ್ತೆಯಲ್ಲಿ ಮಂಗಳೂರಿನತ್ತ ಹೋಗುತ್ತಿದ್ದ ಲಾರಿ ಬೈಕ್ ಸವಾರನ ಮೈಮೇಲೆ ಹರಿದು ಮೃತಪಟ್ಟಿದ್ದು ದೇಹ ಚಿದ್ರವಾಗಿದೆ. ಮಹಿಳೆ ಲಕ್ಷ್ಮಿ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಅವರನ್ನು ಸ್ಥಳೀಯರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಸೋಮೇಗೌಡ, ಪಿಎಸ್ಐ ಆದರ್ಶ ಸ್ಥಳಕ್ಕೆ ಭೇಟಿ ನೀಡಿದ್ದಾರೆ,