ಳಸ ಲೈವ್ ವರದಿ
ಕಳಸ ಸಮೀಪದ ಮೈದಾಡಿಯಲ್ಲಿ ನಡೆಯುತ್ತಿದ್ದ ಕೊರಗಜ್ಜ ಚಿತ್ರದ ಶೂಟಿಂಗ್ ವೇಳೆ ನನಗೂ ಯಾರೂ ಕೂಡ ಯಾವುದೇ ರೀತಿಯಲ್ಲಿ ತೊಂದರೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ಸಂದರ್ಭದಲ್ಲಿ ಅಪರಿಚಿತರು ಬಂದು ನಟಿ ಶುಭಾ ಪೂಂಜಾವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದಾರೆ ಇದರಿಂದ ಚಿತ್ರೀಕರಣ ನಿಲ್ಲಿಸಬೇಕಾಯ್ತು ಎಂದು ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ ಹೇಳಿಕೆ ನೀಡಿದ್ದರು.
ಇದಕ್ಕೆ ಉತ್ತರವಾಗಿ ಅಲ್ಲಿಗೆ ತೆರಳಿದ್ದ ದೈವ ನರ್ತಕ ರವಿ ಕೂಡ ನಾವು ದೈವದ ನರ್ತನದ ಚಿತ್ರೀಕರಣ ಮಾಡಬೇಡಿ ಎಂದು ಮಾತ್ರ ಹೇಳಿದ್ದೇವೆ ಹೊರತು ಯಾವುದೇ ರೀತಿಯ ಅಸಭ್ಯ ವರ್ತನೆ ಮಾಡಿಲ್ಲ. ಶುಭಾ ಪೂಂಜಾರವರನ್ನು ನೋಡೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಈಗ ಸ್ವತಃ ಶುಭಾ ಪೂಂಜಾರವರೆ ವಾಹಿನಿಯೊಂದಕ್ಕೆ ಸ್ಪಷ್ಟನೆ ನೀಡಿದ್ದು, ಈ ರೀತಿಯ ಘಟನೆ ನಡೆದ ವಿಷಯ ನನಗೆ ಗೊತ್ತೇ ಇಲ್ಲ.ಅಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಬಳಿ ಯಾರೂ ಬಂದೇ ಇಲ್ಲ.ನನಗೆ ಯಾರೂ ಏನೂ ಮಾಡ್ಲೆ ಇಲ್ಲ.ನಾನು ಎರಡು ದಿನ ಆ ಸ್ಥಳದಲ್ಲಿ ಇದ್ದೆ ಆದರೆ ನನಗೆ ಯಾರೂ ಏನೂ ತೊಂದರೆ ಮಾಡಿಲ್ಲ ಅನ್ನುವ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.
Related Stories
September 6, 2024