ಕಳಸ ಲೈವ್ ವರದಿ
ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯ ಸುಂಕಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈದಾಡಿ ಗುಡ್ಡದಲ್ಲಿ ಕೊರಗಜ್ಜ ಚಿತ್ರದ ಹಾಡಿಗೆ ಶುಭಾ ಪೂಂಜಾ ಡ್ಯಾನ್ಸ್ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಯುವಕರ ತಂಡವೊಂದು ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ನಡೆಸಲಾಗಿದೆ ಎಂದು ಚಿತ್ರದ ನಿರ್ದೇಶಕ ಸುದೀರ್ ಅತ್ತಾವರ ಆರೋಪದ ಬೆನ್ನಲ್ಲೇ ಅಲ್ಲಿಗೆ ತೆರಳಿದ್ದ ದೈವ ನರ್ತಕ ರವಿ ಸ್ಪಷ್ಟನೆ ನೀಡಿದ್ದಾರೆ.
ಶೋಷಿಯಲ್ ಮೀಡಿಯದಲ್ಲಿ ನಮ್ಮ ಪೊಟೋವನ್ನು ಹಾಕಿ ಶುಭಾ ಪೂಂಜಾ ಅವರ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಹೇಳಿಕೆಯನ್ನು ಸುದೀರ್ ಅತ್ತಾವರ ನೀಡಿದ್ದಾರೆ ಆದರೆ ಚಿತ್ರೀಕರಣದ ಸಂದರ್ಭದಲ್ಲಿ ನಾವು ಅಲ್ಲಿ ತೆರಳಿದ್ದು ನಿಜ. ದೈವದ ನರ್ತನಕ್ಕೆ ಅದರದ್ದೆ ಆದ ಕಟ್ಟು ಪಾಡುಗಳು ಇವೆ.ಎಲ್ಲೆಂದರಲ್ಲಿ ನರ್ತನ ಮಾಡಿ ಅದನ್ನು ಚಿತ್ರೀಕರಣ ಮಾಡಿ ಸಿನೇಮದ ಹಾಡುಗಳಿಗೆ ಬಳಸುವಂತದಲ್ಲ . ಈ ಬಗ್ಗೆ ದೈವ ನರ್ತನದ ಚಿತ್ರೀಕರಣ ಮಾಡಲು ಸಂಬಂದ ಪಟ್ಟವರ ಬಳಿ ಅನುಮತಿ ಪಡೆದಿದ್ದೀರಾ. ಅನುಮತಿ ಪಡೆದಿದ್ದರೆ ಚಿತ್ರೀಕರಣ ಮಾಡಿ ಇಲ್ಲವಾದರೆ ದೈವ ನರ್ತನದ ಚಿತ್ರೀಕರಣವನ್ನು ಮಾಡಬೇಡಿ ಎಂದು ಅದರ ಮುಖ್ಯಸ್ಥರಿಗೆ ತಿಳಿಸಿದ್ದೇವೆ ಹೊರತು ಅಲ್ಲಿ ಶುಭಾ ಪೂಂಜಾ ಇದ್ದರೆಂದು ನಮಗೆ ಗೊತ್ತೇ ಇರಲಿಲ್ಲ.ನಾವು ಹೇಳಿದ 20 ನಿಮಿಷದಲ್ಲಿ ಅವರು ಚಿತ್ರೀಕರಣ ನಿಲ್ಲಿಸಿ ವಾಪಾಸಾಗಿದ್ದಾರೆ.ಆದರೆ ಈಗ ಕಟ್ಟು ಕತೆಯನ್ನು ಕಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಸುದೀರ್ ಅತ್ತಾವರ ಹೇಳುವ ಪ್ರಕಾರ ಅಪರಿಚಿತ ಯುವಕರ ಗುಂಪು ಶುಭಾ ಪೂಂಜಾ ಅವರ ಕೈ ಹಿಡಿದು ಎಳೆದು ಅಸಭ್ಯ ವರ್ತನೆ ತೋರಿದ್ದಾರೆ. ಕೊರಗಜ್ಜ ಚಿತ್ರಕ್ಕೆ, ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಅಸಭ್ಯ ವರ್ತನೆ ತೋರಿದಲ್ಲದೆ ಕೈಯಲ್ಲಿ ಲಾಂಗು ಮಚ್ಚು ಹಿಡಿದುಕೊಂಡು ಬಂದಿದ್ದರು. ಇದರಿಂದ ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದ ಘಟನೆ ಆಗಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ರು ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ 50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಪಕ್ಷವೊಂದರ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ರು ಎಂದು ನಿರ್ದೇಶಕ ಸುಧೀರ್ ಅತ್ತಾವರ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿ ಅದರಲ್ಲಿ ತಿಳಿಸಿದ್ದಾರೆ.
ಆದರೆ ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ದೂರುಗಳನ್ನು ನೀಡಲಾಗಿಲ್ಲ.
Related Stories
September 6, 2024