ಕಳಸ ಲೈವ್ ವರದಿ
ಮೂಡಿಗೆರೆ ಕಡೆಯಿಂದ ಕಳಸಕ್ಕೆ ಸಾಗುತ್ತಿದ್ದ ಕಾರು ಅಬ್ರುಗುಡಿಗೆ ಬಳಿ ಪ್ರಪಾತಕ್ಕೆ ಉರುಳಿ ಚಾಲಕ ಮೃತಪಟ್ಟಿರುವ ಘಟನೆ ಬಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಜನ್ನಾಪುರದ ಅಣಜೂರು ಮೂಲದ ಅಂಜನ್(38)ಮೃತಪಟ್ಟ ದುರ್ದೈವಿ. ಜನ್ನಾಪುರದಿಂದ ಕಳಸಕ್ಕೆ ನಡುರಾತ್ರಿ ಎರಡು ಗಂಟೆ ಸಮಯದಲ್ಲಿ ದಟ್ಟ ಮಂಜು ಹಾಗೂ ರಸ್ತೆಗೆ ತಡೆಗೋಡೆ ಇಲ್ಲದೇ ಇದ್ದುದರಿಂದ ಮಾರುತಿ800 ಕಾರು ಅಬ್ರುಗುಡಿಗೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 400 ಅಡಿ ಪ್ರಪಾತಕ್ಕೆ ಉರುಳಿದ ಕಾರಣ ಚಾಲಕ ಅಂಜನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಂಜನ್ ಜನ್ನಾಪುರದಲ್ಲಿ ಹೋಟೆಲ್ ವ್ಯವಹಾರ ನಡೆಸಿಕೊಂಡಿದ್ದರು ಎಂದು ತಿಳಿದು ಬಂದಿದೆ.ಕಾರು ಉರುಳಿದ ವಿಷಯ ಬೆಳಿಗ್ಗೆ ಗೊತ್ತಾಗಿ ಸ್ಥಳೀಯರು ಪೆÇಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಾಳೂರು ಪೆÇಲೀಸ್ ಸಬ್ ಇನ್ ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.