ಕಳಸ ಲೈವ್ ವರದಿ
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ತಿಂಗಳ 7 ಮತ್ತು 8 ರಂದು ಭಾವಗೀತೆ ತರಬೇತಿ ಶಿಬಿರ ನಡೆಯಲಿದೆ.
ಕೆ.ಪಿ.ಎಸ್.ಪ್ರೌಢ ಶಾಲಾ ಆವರಣದಲ್ಲಿ ಎರಡು ದಿನಗಳ ಭಾವಗೀತೆ ತರಬೇತಿ ಶಿಬಿರ ನಡೆಯಲಿದ್ದು,ದಿನಾಂಕ 7-10-2023ರಂದು ಮಧ್ಯಾಹ್ನ 2ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಕ.ಸಾಪ.ಕಳಸ ತಾಲ್ಲೂಕು ಅಧ್ಯಕ್ಷ ಅ.ರಾ. ಸತೀಶ್ಚಂದ ವಹಿಸಲಿದ್ದಾರೆ. ಕಳಸ ಕೆ.ಪಿ.ಎಸ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎ.ಡಿ.ಅನಂತಪದ್ಮನಾಭ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಗಾಯಕರಾದ ಎಂ.ಎಸ್.ಸುಧೀರ್ ಆಗಮಿಸಲಿದ್ದಾರೆ.ಮಹಮ್ಮದ್ ರಫೀಕ್, ಪಿ.ಇ.ಅಬ್ದುಲ್ ಕರೀಂ, ಕೆ.ವಿ.ನರೇಂದ್ರ ಕಲ್ಲಾನೆ, ಇರಲಿದ್ದಾರೆ.
08-10-2023ರಂದು ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದ್ದು, ಅ.ರಾ.ಸತೀಶ್ಚಂದ್ರ, ಎಂ.ಎಸ್.ಸುಧೀರ್. ಮಹಮ್ಮದ್ ರಫೀಕ್, ಜಿ.ಶಿವಕುಮಾರಸ್ವಾಮಿ, ಎಸ್.ಎಸ್.ವೆಂಕಟೇಶ್, ಹೆಚ್.ಸಿ.ಅಣ್ಣಯ್ಯ, ಶ್ರೀಮತಿ ಮಮ್ತಾಜ್ ಬೇಗಂ ಇರಲಿದ್ದಾರೆ.