ಕಳಸ ಲೈವ್ ವರದಿ
ಸಂಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆಂಗನಕೊಂಡದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕುದುರೆಮುಖ ಘಟಕದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.
ಸಮಾರಂಭದಲಿ ್ಲಕುದುರೆಮುಖ ಘಟಕದ ಅಧ್ಯಕ್ಷರಾದ ಕೃಷ್ಣೇ ಗೌಡ ಗಾಂಧಿಗೀತೆ ಹಾಡಿದರು.ನಂತರ ನೆಲ್ಲಿ ಬೀಡು ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಸುರೇಶ್ ಭಟ್ ಅವರು ಮಾತನಾಡಿ ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ.ಅವರ ಆಶಯದಂತೆ ಗ್ರಾಮ ಭಾರತ ಮತ್ತು ರೈತ ಭಾರತ ಬಲಿಷ್ಠವಾಗಬೇಕು ಎಂದರು.
ಸಮಾರಂಭದಲ್ಲಿ ನೆಲ್ಲಿಬೀಡು ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಜಯಂತ ಗೌಡ,ಚಿಕ್ಕಮಗಳೂರು ಜಿಲ್ಲಾ ಹಸಿರು ಸೇನೆ ಸಂಚಾಲಕರಾದ ವಕೀಲ ಅನಂತೇಶ್ ಮತ್ತು ಸ್ಥಳೀಯ ರೈತಸಂಘದ ಕಾರ್ಯದರ್ಶಿ ಶ್ರೀನಿವಾಸ್ ಮತ್ತು ರೈತಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.