ಕಳಸ ಲೈವ್ ವರದಿ
ಕಳಸ ವಿಶ್ವಕರ್ಮ ಸಂಘದ ವತಿಯಿಂದ ಕಲ್ಲುಬಾವಿ ಶ್ರೀ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ಶ್ರೀ ವಿಶ್ವಕರ್ಮ ಜಯಂತೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ಪುರೋಹಿತ್ ಪ್ರಶಾಂತ್ ಶರ್ಮ ಮತ್ತು ಸುಬ್ರಹ್ಮಣ್ಯ ಹೊರನಾಡು ಇವರು ನೆರವೇರಿಸಿದರು. ಬೆಳಗ್ಗೆ ವಿಶ್ವಕರ್ಮ ಪೂಜಾ ಮತ್ತು ಯಜ್ಞ ನಡೆಯಿತು. ಮಧ್ಯಾಹ್ನ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಂತರ ಗಾಯತ್ರಿ ಮಹಿಳಾ ಮಂಡಳಿ ಅವರಿಂದ ನೃತ್ಯ ಪ್ರದರ್ಶನ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷರಾದಂತ ಪಿ.ಎ ಕುಮಾರಸ್ವಾಮಿ, ಎಲ್ಲ ಕಾರ್ಯಕಾರಿ ಸಮಿತಿಯ ಸದಸ್ಯರುಗಳು, ಗಾಯತ್ರಿ ಮಹಿಳಾ ಮಂಡಳಿಯ ಅಧ್ಯಕ್ಷರಾದ ಪ್ರೇಮ ಸುಬ್ರಹ್ಮಣ್ಯ ಹೊರನಾಡು ಮತ್ತು ಸದಸ್ಯರುಗಳು ಹಾಜರಿದ್ದರು.