ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ದಲ್ಲಿ 2022-23ನೇ ಸಾಲಿನಲ್ಲಿ 75 ಕೋಟಿ ವ್ಯವಹಾರ ನಡೆಸಿ 8.28 ಲಕ್ಷಗಳ ನಿವ್ವಳ ಲಾಭ ಗಳಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ. ಬೋಜರಾಜ್ ಹೇಳಿದರು.
ಹಿರೇಬೈಲಿನ ಸಂಸ್ಕøತಿ ಮಂದಿರದಲ್ಲಿ ನಡೆದ ಇಡಕಣಿ ಪಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ಸುಮಾರು 75 ಕೋಟಿ ವ್ಯವಹಾರವನ್ನು ನಡೆಸಿ 3350 ಜನ ಸದಸ್ಯರನ್ನು ಹೊಂದಿದ್ದು, 94.38 ಲಕ್ಷ ಶೇರು ಬಂಡವಾಳ ಹೊಂದಿದ್ದು, ಸುಮಾರು 8 ಕೋಟಿ ಠೇವಣಿ ಹೊಂದಿದ್ದು ಡಿಸಿಸಿ ಬ್ಯಾಂಕಿನಿಂದ 6 ಕೋಟಿ ಕೆ ಸಿ ಸಿ ಬೆಳೆಸಾಲ ನೀಡಿದ್ದು ಸ್ವಂತ ಬಂಡವಾಳದಲ್ಲಿ 8.38 ಕೋಟಿ ವಿವಿಧ ಸಾಲಗಳನ್ನು ನೀಡಿದ್ದು, 2022-23 ನೇ ಸಾಲಿಗೆ ಸುಮಾರು 8.28 ಲಕ್ಷಗಳ ನಿವ್ವಳ ಲಾಭ ಗಳಿಸಿದೆ ಎಂದರು. ಸಾಲಗಾರ ಸದಸ್ಯರು ಸಕಾಲದಲ್ಲಿ ಸಾಲ ಮರು ಪಾವತಿಸುವಂತೆ ಸೂಚಿಸಿದರು.
ಸಂಘದ ನಿರ್ದೇಶಕರಾದ ಶ್ರೀ ಎಂ ಪಿ ಗಿರೀಶ್ ರವರು ಮಾತನಾಡಿ ಸುಮಾರು 2 ಕೋಟಿ ವೆಚ್ಚದಲ್ಲಿ ವಿವಿಧ ಉದ್ದೇಶದ ಗೋದಾಮು ಹಾಗೂ ಮಳಿಗೆ ಸಂಕೀರ್ಣ ಇತ್ಯಾದಿಗಳನ್ನು ನಿರ್ಮಿಸಿ ವಿವಿಧ ವ್ಯಾಪಾರ ಮಳಿಗೆಗಳನ್ನು ಪ್ರಾರಂಬಿಸಿ ಅಭಿವೃದ್ಧಿಯನ್ನು ಹೊಂದುತ್ತಿದ್ದು ಇದಕ್ಕೆಲ್ಲಾ ಸದಸ್ಯ ಸಹಕಾರವಿರುತ್ತದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷರಾದ ಶ್ರೀಮತಿ.ಕೆ ಟಿ ವೃಂದಾಪತಿ ಹಾಗೂ ನಿರ್ದೇಶಕರುಗಳಾದ ಶಿ ಎಮ್ ಪಿ ಗಿರೀಶ್, ಹೆಚ್ ಆರ್ ಮಹೇಶ್, ಎಂ ಸಿ ಸಂತೋಷ್, ವಿ ಸಿ ಗೋವರ್ದನ್, ಪುರುಷೊತ್ತಮ್ ಎ ಸುವರ್ಣ, ಶ್ರೀಮತಿ ಸುಲೋಚನಾ, ಪ್ರಸಿಲ್ಲಾಸಾನಾ, ನಾಗೇಶ್ ಕೆ. ಹರೀಶ್, ಕೆ ಎಂ ರವೀಂದ್ರಭಟ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಪ್ರಯಾಗ್, ಸಿಇಒ ರಾದ ಸತೀಶ್ ಇದ್ದರು.