ಕಳಸ ಲೈವ್ ವರದಿ
ಹೊರನಾಡು ರಸ್ತೆಯ ಭದ್ರಾ ನದಿಯ ಹೆಬ್ಬೊಳೆಯಲ್ಲಿ ತೋಟ ಕಾರ್ಮಿಕರೊಬ್ಬರು ಶನಿವಾರ ಬೆಳಗ್ಗೆ ಮುಳುಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಅಲ್ಲಿಗೆ ಸಮೀಪದ ತೋಟವೊಂದಕ್ಕೆ 2 ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರು ಬಂದಿದ್ದರು. ಭದ್ರಾ ನದಿಯಲ್ಲಿ ಅವರು ಶನಿವಾರ ಬೆಳಿಗ್ಗೆ ಮುಳುಗಿದ್ದನ್ನು ಅಲ್ಲೇ ಇದ್ದ ಸ್ಥಳೀಯರು ನೋಡಿದ್ದಾರೆ. ಈ ಬಗ್ಗೆ ಅವರು ಕಳಸ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.
ಕಳಸ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ಗೌಡ , ತಹಸೀಲ್ದಾರ್ ಮಂಜುನಾಥ್, ಕಂದಾಯ ನಿರೀಕ್ಷಕ ಅಜ್ಜೇಗೌಡ, ಕಳಸ ಪಿಡಿಓ ಕವೀಶ್ ಶವ ಪತ್ತೆಗೆ ಅಗತ್ಯ ಕ್ರಮ ವಹಿಸಿದರು. ಅಗ್ನಿಶಾಮಕ ಸಿಬ್ಬಂದಿ ದಿನವಿಡೀ ಪ್ರಯತ್ನ ನಡೆಸಿದರೂ ಶವ ಪತ್ತೆ ಆಗಿಲ್ಲ.
ರಾತ್ರಿ ಸುರಿದ ಮಳೆಯಿಂದ ನೀರಿನ ಮಟ್ಟವೂ ಹೆಚ್ಚಾಗಿದ್ದು, ನೀರಿನ ಬಣ್ಣವೂ ಬದಲಾದ ಕಾರಣ ಶವ ಪತ್ತೆಗೆ ಅಡಚಣೆಯಾಗಿದೆ.
24 ಗಂಟೆಯ ನಂತರ ಶವವು ನೀರಿನಿಂದ ಮೇಲಕ್ಕೆ ಬರುವ ನಿರೀಕ್ಷೆ ಇದ್ದು ಹಳುವಳ್ಳಿವರೆಗೂ ಕಣ್ಗಾವಲು ಇರಿಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ನಿತ್ಯಾನಂದ ತಿಳಿಸಿದ್ದಾರೆ.