ಕಳಸ ಲೈವ್ ವರದಿ
ಪಂಚಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸಾ ಕ್ರಮದಿಂದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಾದ ಸೊಂಟನೋವು, ಮಂಡಿ ನೋವು ವಿವಿಧ ಚರ್ಮ ಕಾಯಿಲೆಗಳು, ಜೀರ್ಣಾಂಗ ಸಂಬಂಧಿ ಕಾಯಿಲೆಗಳಾದ Irritable bowel disease ಬೊಜ್ಜುತನ ಮುಂತಾದ ಕಾಯಿಲೆಗಳಿಗಳಿಂದ ಮುಕ್ತರಾಗಬಹುದು.
ಈ ಚಿಕಿತ್ಸೆಯು ಕಳಸದ ಮಾರ್ಕೆಟ್ ರಸ್ತೆಯಲ್ಲಿರುವ ಪುನರ್ವಸು ಆಯುರ್ವೇದ ಚಿಕಿತ್ಸಾಲಯವು ಕಳೆದ 2 ವರ್ಷಗಳಿಂದ ಜನರಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿದ್ದು ಇನ್ನು ಹೆಚ್ಚಿನ ಚಿಕಿತ್ಸಾ ಅವಶ್ಯಕತೆಯನ್ನು ಮನಗಂಡು ಪಂಚಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸಾ ವಿಧಾನವನ್ನು ಅಳವಡಿಸಿಕೊಂಡಿದೆ.
ಪಂಚಕರ್ಮ ಚಿಕಿತ್ಸಾ ವಿಧಾನಗಳಾದ ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣ ಚಿಕಿತ್ಸಾ ಕ್ರಮಗಳು ಬಹು ಪರಿಣಾಮಕಾರಿಯಾಗಿದ್ದು ದೀರ್ಘಕಾಲದ ಸಮಸ್ಯೆಗೆ ಉತ್ತಮ ಪರಿಣಾಮ ನೀಡುತ್ತವೆ.
ವಯೋಸಹಜ ಸಮಸ್ಯೆಗಳು, ಅನಿದ್ರತೆ, ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳಿಗೆ ಅಭ್ಯಂಗ, ಸ್ವೇದ ಹಾಗೂ ಧಾರ ಚಿಕಿತ್ಸೆ ಪರಿಣಾಮಕಾರಿಯಾಗಿದೆ.
ಈಗ ಕಳಸ ತಾಲೂಕಿನಲ್ಲಿ ಈ ಮೇಲೆ ತಿಳಿಸಿದ ಚಿಕಿತ್ಸಾ ಸೌಲಭ್ಯ ಲಭ್ಯವಿದ್ದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮತ್ತು ಆರೋಗ್ಯವಂತರು ಕೂಡ ತಮ್ಮ ಆರೋಗ್ಯವನ್ನು ಸುಸ್ಥಿತಿಲ್ಲಿಡಲು ಪಂಚಕರ್ಮ ಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ಚಿಕಿತ್ಸಾ ಸೌಲಭ್ಯ ಪಡೆಯಲು ಆಸ್ಪತ್ರೆ ವೈದ್ಯರಾದ ಡಾ ಮಂಜುನಾಥ ಪ್ರಭು ಇವರನ್ನು ಸಂಪರ್ಕಿಸಬಹುದು 9483983323,6363827038