ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರಕಾರ ಪುರಷ್ಕøತ ಪಶು ಸಂಜೀವಿನಿ ಯೋಜನೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಊಟಕಿಲ್ಲದ ಉಪ್ಪಿನಕಾಯಿಯಂತಾಗಿದೆ.
ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಜಾನುವಾರುಗಳಿರುವ ಮನೆ ಬಾಗಿಲಿಗೆ ಹೋಗಿ ತುರ್ತು ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದಾದ್ಯಂತ 290 ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನವನ್ನು ರಾಜ್ಯದ ತಾಲ್ಲೂಕು ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ.
ಆದರೆ ಈ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಸಕಾಲಕ್ಕೆ ಕರ್ತವ್ಯ ನಿರ್ವಹಿಸುತ್ತಿಲ್ಲ.
ಹಳುವಳ್ಳಿಯಲ್ಲಿ ಭಾನುವಾರ ಅಪಘಾತವಾಗಿ ಎತ್ತುವೊಂದು ರಸ್ತೆಯಲ್ಲಿ ಬಿದ್ದಿತ್ತು ಕೂಡಲೇ ತುರ್ತು ಚಿಕಿತ್ಸಾ ವಾಹನದ ಸಹಾಯವಾಣಿ ಸಂಖ್ಯೆ 1962 ಕರೆ ಮಾಡಿದಾಗ ನಮಗೆ ಭಾನುವಾರ ರಜೆ ಸರ್ವಿಸ್ ಕೊಡಲು ಸಾಧ್ಯವಿಲ್ಲ ಎಂಬ ಉತ್ತರ ಬಂದಿತ್ತು. ಆದರೆ ತುರ್ತು ಚಿಕಿತ್ಸೆ ನೀಡುವ ಚಿಕಿತ್ಸಾ ವಾಹನ ಸಿಬ್ಬಂದಿಯವನ್ನು ವಿಚಾರಿಸಿದಾಗ ಈ ವಾಹನದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ವೈದ್ಯರು ಇಲ್ಲ.ವಾಹನ ಓಡಿಸಲು ಡೀಸೆಲ್ ಇಲ್ಲ ಹಾಗೂ ತುರ್ತು ಚಿಕಿತ್ಸೆ ನೀಡಲು ಔಷಧಿಯು ಇಲ್ಲ ಅನ್ನುವ ಉತ್ತರ ಬರುತ್ತದೆ.
ಸೆ 1ರಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಈ ವಾಹನದಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಇನ್ಸ್ಪೇಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್ಗಳನ್ನು ನೇಮಿಸಲಾಗಿದೆ ಆದರೆ ಎರಡು ದಿನದ ಹಿಂದೆಯೇ ಇದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯ ಕೆಲಸ ಬಿಟ್ಟು ಹೋಗಿದ್ದಾರೆ .ಆದ್ದರಿಂದ ಕಳೆದ ಮೂರು ದಿನಗಳಿಂದ ಯಾವುದೇ ಸೌಲಭ್ಯವನ್ನು ನೀಡದೆ ಈ ವಾಹನ ನಿಂತಲ್ಲೇ ನಿಂತು ಹೋಗಿದೆ.
ಸರ್ಕಾರದ ನಿಯಮಾವಳಿಯಂತೆ ಈ ವಾಹನ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಬೇಕು. ಜಾನುವಾರುಗಳ ಮಾಲಿಕರು ಸಹಾಯವಾಣಿ 1962 ಗೆ ಕರೆ ಮಾಡಿದರೆ ಕೆಲ ಸಮಯದಲ್ಲಿಯೇ ಮನೆ ಬಾಗಿಲಿಗೆ ವಾಹನಗಳು ತೆರಳಿ ಚಿಕಿತ್ಸೆ ನೀಡಬೇಕು.
ಈ ವಾಹನದಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಇನ್ಸ್ಪೇಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್ ಇರಬೇಕು.ಈ ಪಶು ಚಿಕಿತ್ಸಾ ಆಂಬುಲೆನ್ಸ್ನಲ್ಲಿ ಆಧುನಿಕ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ ಮತ್ತು ಸ್ಕಾನಿಂಗ್ ಉಪಕರಣ ಮತ್ತು ಅವಶ್ಯಕವಾದ ಔಷಧಿಗಳು ಇರಬೇಕು.
ಈ ಬಗ್ಗೆ ಡಿವಿಜನ್ ಕೋ ಆರ್ಡಿನೇಟರ್ ಶಿವಕುಮಾರ್ ಅವರನ್ನು ಮಾತನಾಡಿಸಿದಾಗ ಕಳಸದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಕಳೆದ ಎರಡು ದಿನಗಳ ಹಿಂದೆ ಕೆಲಸ ಬಿಟ್ಟು ಹೋಗಿದ್ದಾರೆ.ವೈದ್ಯರ ಅಭಾವ ಸಾಕಷ್ಟು ಇದೆ. ವಾಹನ ಓಡಿಸಲು ಡೀಸೆಲ್ ಮತ್ತು ಔಷಧಿಯನ್ನು ಒಂದೇ ದಿನದಲ್ಲಿ ವ್ಯವಸ್ಥೆ ಮಾಡಿಕೊಡುತ್ತೇನೆ. ಪ್ರಾರಂಭದಲ್ಲಿ ಕೆಲವೊಂದು ಲೋಪಗಳು ಬರುತ್ತದೆ ಮುಂದೆ ಎಲ್ಲ ಸರಿಯಾಗುತ್ತದೆ ಎಂಬ ಉತ್ತರವನ್ನು ನೀಡಿದ್ದಾರೆ.