ಕಳಸ ಲೈವ್ ವರದಿ
ಗೃಹ ಲಕ್ಷ್ಮೀ ಯೋಜನೆ ಬಿಡುಗಡೆಯಾಗಿ ಒಂದು ವಾರವಾದರೂ ಕೂಡ ನಮಗೆ ಹಣ ಬಂದಿಲ್ಲ ಎಂದು ಬುಧವಾರ ನಡೆದ ಹೊರನಾಡು ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಮಹಿಳೆಯೊಬ್ಬರು ದೂರು ಹೇಳಿದರು.
ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದೇವೆ ಆದರೆ ದುಡ್ಡು ಬಂದಿಲ್ಲ ಎಂದು ಹೇಳಿದರು.
ಆಹಾರ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತ್ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ ಇವರ ಮೇಲೆ ಕ್ರಮ ಕೈಗೊಳ್ಳಬೆಕು.ಕೃಷಿ ಇಲಾಖೆಯಿಂದ ಕೊಡುವ ಪೈಪ್ ಮತ್ತು ಜೆಟ್ ಗಳು ಕಡಿಮೆ ಗುಣಮಟ್ಟದಾಗಿದ್ದು, ಯಾವುದಕ್ಕೂ ಪ್ರಯೋಜನ ಬರುತ್ತಿಲ್ಲ.ಹೊರನಾಡು ಗ್ರಾಮದಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಬೇಕು. ಮೆಸ್ಕಾಂ ಇಲಾಖೆಯ ವಿದ್ಯುತ್ ಬಿಲ್ ನೀಡುವವರು ಸರಿಯಾಗಿ ಮೀಟರ್ ರೀಡ್ ನೋಡದೆ ಅಂದಾಜು ಬಿಲ್ ಗಳನ್ನು ನೀಡಿದ ಪರಿಣಾಮ ಈಗ ಗ್ರಾಹಕರಿಗೆ ಗೃಹ ಜ್ಯೋತಿಯ ಸೌಲಭ್ಯದಿಂದ ವಂತಿರಾಗುತ್ತಿದ್ದಾರೆ.ಮೆಸ್ಕಾಂ ಮಾಡಿದ ಯಡವಟ್ಟಿಗೆ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ ಎಂದು ಗ್ರಾಮಸ್ಥರು ತಮ್ಮ ದೂರುಗಳನ್ನು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಮುಧು ಕುಮಾರ್ ವಹಿಸಿದ್ದರು.ನೋಡೆಲ್ ಅಧಿಕಾರಿ ಸೋಮಶೇಖರ್, ಪಂ ಉಪಾಧ್ಯಕ್ಷೆ ಪುಷ್ಪಲತಾ ರಾಮು, ಸದಸ್ಯರಾದ ವೃಷಭರಾಜ್,ಶ್ರೀಮತಿ ಸನ್ಮತಿ, ಅದಿತ್ಯ, ಶ್ರೀಮತಿ ಯಶೋದ, ಪಿಡಿಒ ಅರುಣ್ ಕುಮಾರ್ ಇದರು.