ಕಳಸ ಲೈವ್ ವರದಿ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕಳಸ ವಲಯದ ಸಂಸೆ ಕಾರ್ಯಕ್ಷೇತ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಾಮಾಜಿಕ ಅರಣ್ಯ ಕಾರ್ಯಕ್ರಮದಡಿ ಹಣ್ಣು ಹಂಪಲು ಗಿಡ ವಿತರಣೆ ಮತ್ತು ಗಿಡ ನಾಟಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಸುರೇಶ್ ಕಾರ್ಯಕ್ರಮದ ಉದ್ದೇಶ, ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕಳಕಳಿ, ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಪರಿಚಯದ ಹಾಗೂ ಪರಿಸರ ಜಾಗೃತಿ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಮಾಕ್ಷಿ, ವಲಯ ಅರಣ್ಯಧಿಕಾರಿ ನಿಶ್ಚಿತ್, ಕೀರ್ತಿ ಜೈನ್, ಶಾಲಾ ಮುಖ್ಯ ಶಿಕ್ಷಕ ಕೆಂಚಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬುಬುಕ್ಕರ್, ವಿಪತ್ತು ಘಟಕದ ಮಾಸ್ಟರ್ ಬಿ.ಕೆ.ಮಹೇಶ್, ಒಕ್ಕೂಟದ ಉಪಾಧ್ಯಕ್ಷೆ ಸುನಂದಾ, ಕೃಷಿ ಮೇಲ್ವಿಚಾರಕ ರವಿಚಂದ್ರ, ವಲಯದ ಮೇಲ್ವಿಚಾರಕ ಹರೀಶ್, ಸ್ಥಳೀಯ ಸೇವಾಪ್ರತಿನಿಧಿಗಳಾದ ಅಶ್ವಿನಿ, ವಿನುತಾ, ವಿಪತ್ತು ಘಟಕದ ಸದಸ್ಯರುಗಳಾದ ಸುಧಾಕರ್, ಮಂಜುನಾಥ್, ಹೆರಾಲ್ಡ್, ಉμÁ, ರಾಮಕುಮಾರ್, ಅರುಣ್ ಯೋಜನೆಯ ಪಾಲುದಾರ ಸದಸ್ಯರುಗಳು ಇತರರು ಇದ್ದರು.