ಕಳಸ ಲೈವ್ ವರದಿ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿ0ದ ಸಾಹಿತ್ಯ ಶ್ರಾವಣ ಕಾರ್ಯಕ್ರಮ ನೆರವೇರಿತು.
ಸಮಾರಂಭದಲ್ಲಿ ತಾಲೂಕು ಅಧ್ಯಕ್ಷ ಅ.ರಾ. ಸತೀಶ್ಚಂದ್ರ ಮಾತನಾಡಿ, ಮಲೆನಾಡಿನಲ್ಲಿ ಶ್ರಾವಣ ಮಾಸದಲ್ಲಿ ಮನೆ ಮನೆಗಳಲ್ಲಿ ದಾರ್ಮಿಕ ವಿಧಿ ಆಚರಣೆಗಳು ಅವರವರ ಮನೆಗಳಲ್ಲಿ ಆಚರಣೆ ನಡೆಯುತ್ತದೆ. ಚೂಡಿ ಪೂಜೆ, ಉಪಾಕರ್ಮ, ಗೌರಿವೃತ,ನಾಗರ ಪಂಚಮಿ ಹೀಗೆ ಹಬ್ಬಗಳ ಸರಮಾಲೆ ಇರುತ್ತದೆ. ಮಲೆನಾಡಿನಲ್ಲಿ ಸಾಮೂಹಿಕ ಶ್ರವಣ ಆರಾಧನೆ ಕಥಾ ಶ್ರವಣ ಇಂತವು ಕಡಿಮೆ. ಕಾರಣ ಭೌಗೋಳಿಕ ಪ್ರದೇಶ ದೊಡ್ಡ ದೆ ಹೊರತು ಜನಸಂಖ್ಯೆ ಆದಾರದಲ್ಲಿ ಅಲ್ಲ . ಇಲ್ಲಿನ ಪದ್ಧತಿಯ ಪ್ರಕಾರ ಅದು ಹೊಂದಿಕೊಂಡಿಲ್ಲ. ಈ ಶ್ರಾವಣ ಮಾಸದಲ್ಲಿ ಹೆಚ್ಚು ಈಶ್ವರ ದೇವಾಲಯ ರುದ್ರ ಅಭಿμÉೀಕ.ಧ್ಯಾನ ಭಜನೆ ಇವು ನಡೆಯುತ್ತದೆ. ನಮಲ್ಲಿ ಒಟ್ಟಿಗೆ ಸೇರಿ ಭಜನೆ ಕಥಾ ಶ್ರವಣ ಪದ್ದತಿ ಇಲ್ಲ..ಮಲೆನಾಡಿಗೂ ಬಯಲು ಸೀಮೆಗೆ ಈ ವಿಚಾರದಲ್ಲಿ ವತ್ಯಾಸವಿದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಸಂಚಾಲಕ ಪಾಂಡುರಂಗ ಮಾತನಾಡಿದರು. ಕ.ಸಾ.ಪ.ಮೂಡಿಗೆರೆ ತಾಲೂಕು ಮಾಜಿ ಅಧ್ಯಕ್ಷ ಆ.ರಾ.ರಾಧಾಕೃಷ್ಣ, ಕಳಸ ಹೋಬಳಿ ಅಧ್ಯಕ್ಷ ಶೇಖರ್ ಶೆಟ್ಟಿ, ತಾಲೂಕು ಕಸಾಪ ಖಜಾಂಚಿ ಕಿರಣ್ಶೆಟ್ಟಿ, ಕಳಸ ಗ್ರಾಪಂ ಮಾಜಿ ಅಧ್ಯಕ್ಷ ಸುಜಯಾ, ಮಹಿಳಾ ಘಟಕದ ಕಾರ್ಯದರ್ಶಿ ಸುಮನಾ ಜಯರಾಜ್ ಇದ್ದರು.