ಕಳಸ ಲೈವ್ ವರದಿ
ಕಾಡುಕೋಣ ದಾಳಿಯಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಳಸ ತಾಲ್ಲೂಕಿನ ಮುಜೆಕಾನ್ ಮರಿ ಗೌಡ ಅವರಿಗೆ ಅರಣ್ಯ ಇಲಾಖೆ ಸೇರಿದಂತೆ ಊರಿನ ಜನರಿಂದ ಆರ್ಥಿಕ ನೆರವು ನೀಡಲಾಗಿದೆ.
ಆಗಸ್ಟ್ 26ರಂದು 60 ವರ್ಷ ವಯಸ್ಸಿನ ಗೌಡಲು ಸಮುದಾಯದ ವೃದ್ಧ ಮರಿಗೌಡ ಕಳಸಕ್ಕೆ ಬರುತ್ತಿದ್ದಾಗ ಅವರ ಎದೆಗೆ ಕಾಡುಕೋಣ ತಿವಿದಿತ್ತು. ಕೋಣದ ದಾಳಿಯಿಂದ ಅವರ ಶ್ವಾಸಕೋಶದಲ್ಲಿ ಮೂರು ಕಡೆ ರಂಧ್ರಗಳಾಗಿದ್ದವು.ಎದೆಯ ಮೂಳೆಗಳು ಮುರಿದಿದ್ದವು.
ಚಿಕಿತ್ಸೆಗೆ ಒಟ್ಟು 3 ಲಕ್ಷ ರೂಪಾಯಿ ಖರ್ಚು ತಗುಲಬಹುದು ಎಂದು ಕುಟುಂಬಸ್ಥರು ಅಂದಾಜಿಸಿದ್ದರು. ಪರಿಶಿಷ್ಟ ವರ್ಗದ ಗೌಡಲು ಸಮುದಾಯಕ್ಕೆ ಸೇರಿದ ಮರಿಗೌಡ ಅತಿ ಸಣ್ಣ ಕೃಷಿಕರಾಗಿದ್ದಾರೆ. ಸ್ವಲ್ಪ ಗದ್ದೆ ಮತ್ತು ಅರಣ್ಯ ಹಕ್ಕು ಕಾಯ್ದೆಯ ತೋಟದಲ್ಲಿ ಕೃಷಿ ಮಾಡುತ್ತಿದ್ದ ಮರಿಗೌಡ ಅವರಿಗೆ ಪತ್ನಿ ಇದ್ದಾರೆ.ಆದರೆ ಈ ದಂಪತಿಗೆ ಮಕ್ಕಳು ಇಲ್ಲದೆ ಅಕ್ಕ ಪಕ್ಕದ ಮನೆಯವರೇ ಆಸ್ಪತ್ರೆಯಲ್ಲಿ ಶುಶ್ರೂμÉಯ ಮಾಡುತ್ತಿದ್ದರು.
ಮರಿಗೌಡರ ಚಿಕಿತ್ಸೆಗೆ ಅರಣ್ಯ ಇಲಾಖೆಯು 1 ಲಕ್ಷ ರೂ ನೀಡಿದ್ದು, ಹೊರನಾಡು ಅನ್ನಪೂಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ 20 ಸಾವಿರೂ ನೆರವು ನೀಡಿದ್ದರು.
ಸಾರ್ವಜನಿಕರು ಒಟ್ಟು ಸೇರಿ ಸುಮಾರು ಒಂದು ಲಕ್ಷ ರೂಗಳ ನೆರವನ್ನು ನೀಡಿ ಮರಿಗೌಡರ ಚಿಕಿತ್ಸೆಗೆ ನೆರವಾಗಿದ್ದಾರೆ.
ಗಂಭಿರವಾಗಿ ಗಾಯಗೊಂಡಿದ್ದ ಮರಿ ಗೌಡ ಶಸ್ತ್ರ ಚಿಕಿತ್ಸೆಗಳು ನಡೆದು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅರಣ್ಯ ಇಲಾಖೆ ಚೆಕ್ ನೀಡುವ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ, ವಲಯ ಅರಣ್ಯಾಧಿಕಾರಿ ನಿಶ್ಚಿತ್, ಕಾಂಗ್ರೆಸ್ ಮುಖಂಡರಾದ ಕೆ.ಆರ್.ಪ್ರಭಾಕರ್, ಶ್ರೇಣಿಕ್, ಮಹಮ್ಮದ್ ರಫೀಕ್, ವೀರೇಂದ್ರ, ಸುಜಿತ್, ಕಳಸೇಶ್ವರ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರುದ್ರಯ್ಯ ಆಚಾರ್, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಇದ್ದರು.