ಕಳಸ ಲೈವ್ ವರದಿ
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಂಚೆ ಕಚೇರಿಯಲ್ಲಿ ಮಾರಾಟ ಮಾಡುತ್ತಿರುವ ರಾಷ್ಟ್ರದ್ವಜದ ಗುಣಮಟ್ಟ ಕಳಪೆಯಾಗಿದೆ ಎಂದು ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು ಆರೋಪಿಸಿದ್ದಾರೆ.
ರಾಷ್ಟ್ರದ್ವಜ ಅತ್ಯಂತ ಕಳಪೆ ಮಟ್ಟದಾಗಿದ್ದು, ರಾಷ್ಟ್ರದ್ವಜಕ್ಕೆ ಒಂದು ನಿಯಮವಿದೆ ಆ ನಿಯಮದ ಪ್ರಕಾರ ದ್ವಜ ಇಲ್ಲ.ಕಳೆದ ಬಾರಿ ಸ್ವಾತಂತ್ರ್ಯ ದಿನಾಚರಣೆಗೂ ಇದೇ ರೀತಿಯ ಕಳಪೆ ಗುಣಮಟ್ಟದ ರಾಷ್ಟ್ರದ್ವಜ ಮಾರಾಟ ಮಡಲಾಗಿತ್ತು ಆಗಲೂ ಇದರ ಬಗ್ಗೆ ಆಕ್ಷೇಪ ಎತ್ತಲಾಗಿತ್ತು.ಆದರೆ ಈ ಬಾರಿಯೂ ಮತ್ತದೇ ಪುನಾರಾವರ್ತನೆ ಆಗಿರುವುದು ಇದು ಬೇಜಾವಬ್ದಾರಿತನ.
ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಜು ಆಗ್ರಹಿಸಿದ್ದಾರೆ.