ಕಳಸ ಲೈವ್ ವರದಿ
ಕಾರಗದ್ದೆ ಶ್ರೀ ವೀರನಾರಾಯಣ ದೇವಸ್ಥಾನದ ಆವರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಗದ್ದೆ ಮತ್ತು ಹೇರಡಿಕೆ ಒಕ್ಕೂಟದ ವತಿಯಿಂದ ಸ್ವಚ್ಚತಾ ಕಾರ್ಯ ಮಾಡಲಾಯಿತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರದ್ದಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.
ಎರಡೂ ಒಕ್ಕೂಟದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಶೌರ್ಯ ತಂಡದ ಸದಸ್ಯರು, ಚೇತನಾ ಜ್ಞಾನ ವಿಕಾಸ ಮತ್ತು ಸಹನಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಈ ಕಾರ್ಯದಲ್ಲಿ ಭಾಗವಹಿಸಿ ದೇವಸ್ಥಾನವನ್ನು ಗುಡಿಸಿ ಒರೆಸಿ ದೇವಸ್ಥಾನದ ಆವರಣವನ್ನು ಸ್ವಚ್ಚಗೊಳಿಸಿದರು.
ಸ್ವಚ್ಚತೆಯಲ್ಲಿ ಪಾಲ್ಗೊಂಡವರಿಗೆ ಕಾರಗದ್ದೆ ವೀರನಾರಾಯಣ ಯುವಕ ಮಂಡಲದ ಅದ್ಯಕ್ಷರು ಮತ್ತು ಕಮಿಟಿಯ ಸದಸ್ಯರು ಪಾನೀಯ ಮತ್ತು ಊಟದ ವ್ಯವಸ್ಥೆಯನ್ನು ಮಾಡಿದ್ದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಹರೀಶ್, ಕೃಷಿ ಮೇಲ್ವಿಚಾರಕರಾದ ರವಿಚಂದ್ರ , ದೇವಾಸ್ಥಾನದ ಕಮಿಟಿಯ ಸದಸ್ಯರಾದ ಸತೀಶ್ ಭಟ್ , ಕೃಷ್ಣೇ ಗೌಡ್ರು, ರಾಜೀವ್ ಭಟ್, ಗೋಪಾಲ್ ಗೌಡ್ರು ಇದ್ದರು.
Related Stories
September 6, 2024