ಕಳಸ ಲೈವ್ ವರದಿ
ಇಲ್ಲಿಯ ಇತಿಹಾಸ ಪ್ರಸಿದ್ಧಿಯಾಗಿರುವ ಕಳಸ ಶ್ರೀಕಲಶೇಶ್ವರ ಸ್ವಾಮಿ ಸಕಲ ಇಷ್ಟಾರ್ಥಗಳನ್ನು ಕರುಣಿಸುವ ಭಕ್ತರ ಆರಾಧ್ಯ ದೇವರು. ಇಲ್ಲಿಗೆ ನಿತ್ಯ ಬರುವ ನೂರಾರು ಭಕ್ತರು ದೇವರಲ್ಲಿ ನಾನಾ ರೀತಿಯ ಬೇಡಿಕೆಯನ್ನು ಇಡುತ್ತಾರೆ. ಅದೆಷ್ಟೋ ಬೇಡಿಕೆಗಳು ಈಡೇರಿಕೆಯಿಂದ ನಾನಾ ರೂಪದ ಹರಕೆಗಳನ್ನು ತೀರಿಸುತ್ತಾರೆ. ಭಕ್ತಿಯಿಂದ ಬೇಡಿದರೆ ಕಲಶೇಶ್ವರ ಕೈ ಬಿಡೋದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಭಲವಾಗಿದೆ.
ಇಲ್ಲೊಬ್ಬ ಭಕ್ತ ನಾನು ಸರ್ವಾಂಗ ಸುಂದರನೆಂಬ ಪ್ರಖ್ಯಾತಿಯಾಗಬೇಕು ಎಂದು ಇಲ್ಲಿಯ ಪರಿವಾರ ದೇವರುಗಳಾದ ಗಿರಿಜಾ ದೇವರಿಗೆ ಬೇಡಿಕೆ ಪತ್ರವನ್ನು ಕಾಣಿಕೆ ಹುಂಡಿಗೆ ಹಾಕಿ ಬೇಡಿಕೊಂಡ ವಿಚಾರ ಸದ್ದಿಲ್ಲದೆ ಸುದ್ದಿಯಾಗುತ್ತಿದೆ.
ಗುರುವಾರ ಕಲಶೇಶ್ವರ ದೇವರು ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿಯ ಪರ್ಕಾವಣೆ ನಡೆಯಿತು. ಈ ಪರ್ಕಾವಣೆಯ ಸಂದರ್ಭದಲ್ಲಿ ಈ ಬೇಡಿಕೆ ಪತ್ರ ಸಿಕ್ಕಿದೆ.
ಪತ್ರದಲ್ಲಿ ಹೀಗಿದೆ…ನಾನು ಗಿರಿಜಾ ದೇವಿ ಸರ್ವಾಂಗ ಸುಂದರಿಯಾದ ನಿಮ್ಮ ಆಶೀರ್ವಾದ ಬಯಸುತ್ತಿದ್ದೇನೆ. ನಾನು ಒಬ್ಬ ಉತ್ತಮ ನಟ-ಪ್ಯಾಷನ್ ಮಾಡೆಲ್ ಆಗಬೇಕೆಂದಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ನಿಮ್ಮ ಆಶೀವಾದ ಆಶಿಸುತ್ತೇನೆ. ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲಿ ಸರ್ವಾಂಗ ಸುಂದರನೆಂಬ ಪ್ರಖ್ಯಾತಿಯಾಗಬೇಕು. ಇದು ನಿಮ್ಮ ಭಕ್ತನ ನೇಡಿಕೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇನ್ನೊಬ್ಬ ಭಕ್ತ ನನ್ನ ಜೀವನವನ್ನು ನಾಶ ಮಾಡ್ತಿರೋ ನನ್ನ ಮನೆಯವರನ್ನು ಯಾರನ್ನು ಉಳಿಸಬೇಡ ಎಂದು ಪತ್ರದಲ್ಲಿ ಬರೆದು ಹುಂಡಿಗೆ ಹಾಕಿದ್ದಾನೆ.