ಕಳಸ ಲೈವ್ ವರದಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವುದರ ಮುಖಾಂತರ ಸಾಹಿತ್ಯ ಪರಿಷತ್ತನ್ನು ಗಟ್ಟಿಗೊಳಿಸಿ ಎಂದು ಕ.ಸಾ.ಪ ಕಳಸ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಳಸ ತಾಲ್ಲೂಕು ಮತ್ತು ಕಳಸ ತಾಲ್ಲೂಕು ಮಹಿಳಾ ಘಟಕದಿಂದ ಕಳಸ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕ.ಸಾ.ಪ ಅಜೀವ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕ.ಸಾ.ಪ ದ ಅಜೀವ ಸದಸ್ಯತ್ವ ಮಾಡಿಕೊಳ್ಳುವುದರಿಂದ ಐದು ವರ್ಷಕ್ಕೋಮ್ಮೆ ನಡೆಯುವ ಕ.ಸಾ.ಪದ ಜುನಾವಣೆಗೆ ಮತ ಹಾಕುವ ಹಕ್ಕನ್ನು ಪಡೆದುಕೊಳ್ಳುವುದರ ಜೊತೆಗೆ ಕ.ಸಾ.ಪದ ವಿವಿಧ ಹುದ್ದೆಗಳನ್ನು ಕೂಡ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರುಗಳು ಕ.ಸಾ.ಪದ ಅಜೀವ ಸದಸ್ಯತ್ವವನ್ನು ಪಡೆದುಕೊಂಡರು.
ಕ.ಸಾ.ಪ ತಾಲ್ಲೂಕು ಅಧ್ಯಕ್ಷ್ರ ಅ.ರಾ.ಸತೀಶ್ಚಂದ್ರ, ಜಿಲ್ಲಾ ಸಂಚಾಲಕ ಪಾಂಡುರಂಗ, ಹೊಬಳಿ ಅಧ್ಯಕ್ಷ ಶೇಖರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ, ಪ್ರೇಂ ಕುಮಾರ್,ಅಜಿತ್ ಜೈನ್, ಕಿರಣ್ ಶೆಟ್ಟಿ, ಸುಮನಾ ಜಯರಾಜ್, ನಿಖಿತಾ, ನಗೀನಾ ಇತರರು ಇದ್ದರು.