ಕಳಸ ಲೈವ್ ವರದಿ
ಕಳೆದ ಒಂದು ವಾರದಿಂದ ಬಿಡುವು ನೀಡಿದ್ದ ಮಳೆ ಬುಧವಾರ ಕಳಸ ತಾಲ್ಲೂಕಿನಾಧ್ಯಂತ ಮಳೆ ಬಿರುಸು ಹೆಚ್ಚಾಗಿದೆ.
ಅಬ್ಬರದ ಮಳೆಯ ಪರಿಣಾಮ ಕಳಸದ ಓಣಿಗಂಡಿ ಎಂಬಲ್ಲಿ ನಿವೃತ್ತ ಶಿಕ್ಷಕ ಭಾಸ್ಕರ್ ಡೋಂಗ್ರೆ ಅವರ ಮನೆಯ ಪಕ್ಕದ ತಡೆಗೋಡೆ ಬಿದ್ದಿದೆ. ಕಳೆದ ಒಂದು ವರ್ಷದ ಹಿಂದೆಯಷ್ಟೆ ನಿರ್ಮಾಣ ಮಾಡಿದ್ದ ತಡೆಗೋಡೆ ಬಿದ್ದ ಪರಿಣಾಮ ಮನೆಯೂ ಬಿರುಕು ಬಿಟ್ಟು ಹಾನಿಯಾಗಿದೆ. ಕಳಸ ಗಣಪತಿ ಕಟ್ಟೆ ಗೋಪಾಲ ಎಂಬುವವರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಗೆ ಹಾನಿಯಾಗಿದೆ. ಬಸ್ರಿಕಲ್ ಸಮೀಪ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ತೊಂದರೆ ಉಂಟಾಯಿತು.