ಕಳಸ ಲೈವ್ ವರದಿ
ವಿಶ್ವ ಹಿಂದೂ ಪರಿಷದ್ ಬಜರಂಗದಳ ಶೃಂಗೇರಿ ಜಿಲ್ಲಾ ಸಂಯೋಜಕರಾಗಿ ಅಜಿತ್ ಕುಲಾಲ್ ಆಯ್ಕೆಗೊಂಡಿದ್ದಾರೆ.
ಭಾನುವಾರ ನಡೆದ ಬೆಂಗಳೂರು ಪ್ರಾಂತ್ಯ ಬೈಠಕ್ ನಲ್ಲಿ ಅಜಿತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಘಟನೆಯನ್ನು ಬಲ ಪಡಿಸುವ ಉದ್ದೇಶದಿಂದ ಚಿಕ್ಕಮಗಳೂರು ಜಿಲ್ಲೆಯನ್ನು ಎರಡು ಎರಡು ಜಿಲ್ಲೆಗಳನ್ನಾಗಿ ವಿಂಗಡಿಸಲಾಗಿದೆ.ಶೃಂಗೇರಿ ಜಿಲ್ಲೆಯಲ್ಲಿ ಕಳಸ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಬಾಳೆಹೊನ್ನೂರು ಒಳಗೊಂಡಿದೆ.
ಅಜಿತ್ ಕುಲಾಲ್ ಈ ಹಿಂದೆ ವಿಶ್ವ ಹಿಂದೂ ಪರಿಷದ್ ಬಜರಂಗದಳದ ಚಿಕ್ಕಮಗಳೂರು ಜಿಲ್ಲಾ ಗೋ ರಕ್ಷಕ ಪ್ರಮುಖರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಅಕ್ರಮ ಜಾನುವಾರು ಸಾಗಾಟಗಳನ್ನು ತಡೆದು ನೂರಾರು ಗೋವುಗಳ ರಕ್ಷಣೆಯನ್ನು ಮಾಡಿರುವುದಲ್ಲದೆ ಕಳಸದಲ್ಲಿ ವೈಭವಯುತ ದತ್ತ ಜಯಂತಿಯ ಶೋಭಾಯಾತ್ರೆ, ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಪ್ರತಿಭಟನೆ, ತುರ್ತು ಸಂದರ್ಭದಲ್ಲಿ ರಕ್ತದಾನ, ಕೋವಿಡ್ ಸಂದರ್ಭದಲ್ಲಿ ಶವ ಸಂಸ್ಕಾರವನ್ನು ಮಾಡುವ ಮುಖಾಂತರ ಉತ್ತಮ ಕಾರ್ಯಕ್ರಮಗಳನ್ನು ಮಾಡಿದ್ದರು.