ಕಳಸ ಲೈವ್ ವರದಿ
ವಿದ್ಯಾಭಾರತಿ ಚಿಕ್ಕಮಗಳೂರು, ಪ್ರಬೋಧಿನಿ ಸೇವಾ ಪ್ರತಿಷ್ಠಾನ ಹಾಗೂ ಪ್ರಬೋಧಿನಿ ವಿದ್ಯಾಕೇಂದ್ರ ಸಹಯೋಗದಲ್ಲಿ ಜಿಲ್ಲಾ ಶೈಕ್ಷಣಿಕ ಸಹಮಿಲನ-2023 ಕಾರ್ಯಕ್ರಮ ಶನಿವಾರ ಕಳಸ ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ನಡೆಯಿತು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಚಿಕ್ಕಮಗಳೂರು ವಿದ್ಯಾಭಾರತಿಯ ಕಾರ್ಯದರ್ಶಿ ಶಂಕರನಾರಾಯಣ, ಅಧ್ಯಕ್ಷ ಗುರುಮೂರ್ತಿ ಕೊಪ್ಪ, ವಿದ್ಯಾಭಾರತಿ ಕರ್ನಾಟಕದ ಉಪಾಧ್ಯಕ್ಷರಾದ ಮಹಿಪಾಲ್ ರೆಡ್ಡಿ ಪಾಟೀಲ್ ಹಾಗೂ ಕಳಸ ಪ್ರಬೋಧಿನಿ ವಿದ್ಯಾಕೇಂದ್ರ ಕಾರ್ಯದರ್ಶಿ ರಾಘವೇಂದ್ರ ಭಟ್ ಇದ್ದರು.
ಉತ್ತಮ ಶಿಕ್ಷಕರಾಗಲು ಬೇಕಾಗುವ ಅರ್ಹತೆಗಳ ಬಗ್ಗೆ ಚಿಂತಕರಾದ ಸತ್ಯೇಂದ್ರ ಬೆಳ್ಳೂರು ಉಪನ್ಯಾಸ ನೀಡಿದರು.
ಜಿಲ್ಲೆಯ ಒಟ್ಟು 150 ಕ್ಕು ಹೆಚ್ಚು ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಮದ್ಯಾಹ್ನದ ನಂತರ ಗಜೆಂದ್ರ ಗೊರಸುಕುಡಿಗೆ ಇವರಿಂದ ಪರಿಸರ ಮತ್ತು ನಾವು ಹಾಗೂ ವಿವೇಕ ವಿದ್ಯಾವಾಹಿನಿ ಟ್ರಸ್ಟ್ ಮೈಸೂರಿನ ಸಂಸ್ಥಾಪಕರಾದ ನಿತ್ಯಾನಂದ ವಿವೇಕವಂಶಿ ಇವರು ಭಾರತೀಯ ಜ್ಞಾನ ಪರಂಪರೆ ಬಗ್ಗೆ ಉಪನ್ಯಾಸ ನೀಡಿದರು.