ಕಳಸ ಲೈವ್ ವರದಿ
ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವ ನೋಂದಣಿ ಅಭಿಯಾನ ಶುಕ್ರವಾರ ಕಳಸದಲ್ಲಿ ಪ್ರಾರಂಭಗೊಂಡಿತು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶಿಲ್ದಾರ್ ತನುಜ ಸವದತ್ತಿ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು.
ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯರ ಸಂಖ್ಯೆ ಹೆಚ್ಚಿಸು ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ.ಕ.ಸಾ.ಪದ ಅಜೀವ ಸದಸ್ಯರಾಗುವವರು ಒಂದು ಪೊಟೋ, ಆಧಾರ್ ಕಾರ್ಡ್ ಗುರುತು ಸಂಖ್ಯೆ ಹಾಗೂ 410 ರೂ ಶುಲ್ಕದೊಂದಿಗೆ ಶೇಖರ್ ಶೆಟ್ಟಿ 948121899 ಅಥವಾ ಸುದೀಶ್ ಸುವರ್ಣ 9480107981 ಅವರನ್ನು ಸಂಪರ್ಕಿಸ ಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಗ್ರಾ.ಪಂ ಅಧ್ಯಕ್ಷೆ ಸುಜಯ ಸದಾನಂದ, ಎಎಸೈ ಮೋಹನ್ ರಾಜಣ್ಣ, ಕವಿ ಪ್ರೇಂ ಕುಮಾರ್, ಅಜಿತ್ ಜೈನ್, ಆರ್ಐ ಅಜ್ಜೇ ಗೌಡ, ಶಿರಸ್ತೇದಾರ್ ಶ್ರೀಮತಿ ಸುಧಾ ಇತರರು ಇದ್ದರು.