ಕಳಸ ಲೈವ್ ವರದಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಬಳಿ ಜೈನ ಮುನಿ ಕಾಮಕುಮಾರ ನಂದಿ ಅವರ ಕೊಲೆ ವಿರೋಧಿಸಿ ಕಳಸ ಜೈನ ಸಮುದಾಯವು ಇದೆ ಗುರುವಾರ ಮೌನ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಲಿದೆ.
ಅಂದು ಬೆಳಿಗ್ಗೆ 10.30ಕ್ಕೇ ಕಳಸದ ಕೈಮರದಿಂದ ಮುಖ್ಯ ರಸ್ತೆ ಮೂಲಕ ಮೌನ ಮೆರವಣಿಗೆ ನಡೆಸಿ, ನಂತರ ಕಳಸ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿ ನಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ.
ಕಳಸ ಸೀಮೆಯ ಎಲ್ಲ ಜೈನ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ..
Related Stories
September 6, 2024