ಕಳಸ ಲೈವ್ ವರದಿ
ಸಮಾಜಮುಖಿ ಕೆಲಸಗಳನ್ನು ಮಾಡುವುದರ ಮುಖಾಂತರ ನಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.
ಭಾನುವಾರ ಕಳಸ ರೋಟರಿ ಭವನದಲ್ಲಿ ನಡೆದ ಕಳಸ ರೋಟರಿ ಸಂಸ್ಥೆ ಮತ್ತು ಇನ್ನರ್ವೀಲ್ ಸಂಸ್ಥೆಯ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಈ ಭೂಮಿ ನಮಗೆ ಬದುಕಲು ಅವಕಾಶ ಮಾಡಿಕೊಟ್ಟಿದೆ. ಈ ದೇಶದ ಅಭಿವೃದ್ಧಿಗೆ ನಮ್ಮ ಕೊಡುಗೆಯನ್ನು ಕೊಡುವುದರ ಮುಖಾಂತರ ಈ ಭೂಮಿಯ ಋಣವನ್ನು ನಾವು ತೀರಿಸಬೇಕು.ಅದಕ್ಕೆ ರೋಟರಿಯಂತಹ ಸಂಸ್ಥೆಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಇದಕ್ಕಿಂತ ಮುಂಚಿತವಾಗಿ ಇಲ್ಲಿನ ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಸಾವಿತ್ರಿ ಜಿ.ಜೋಷಿ ಮತ್ತು ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷರಾಗಿ ಸಂಧ್ಯಾ ರಿತೇಶ್ ಅಧಿಕಾರ ಸ್ವೀಕರಿಸಿದರು.
ಸಹಾಯಕ ಗವರ್ನರ್ ಜೆ.ಎಂ.ಶ್ರೀಹರ್ಷ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ರೋಟರಿ ಝೋನಲ್ ಲೆಫ್ಟಿನೆಂಟ್ ಕಿರಣ್ ಶೆಟ್ಟಿ ಇದ್ದರು.
ಡಿ.ಕೆ.ಪಣೀಶ್ ಕಾರ್ಯದರ್ಶಿ, ಗಿರಿಜಾಶಂಕರ ಜೋಷಿ ಖಜಾಂಚಿ, ಅರಿಂಜಯ್ ಸಾಜರ್ಂಟ್ ಅಧಿಕಾರ ಸ್ವೀಕರಿಸಿದರು.ಕೆ.ಆರ್.ಪ್ರಭಾಕರ್, ಡಾ.ವಿಕ್ರಮ ಪ್ರಭು, ಡಾ.ಸಂತೋμï ಪೂಜಾರಿ,ಕೆ.ಕೆ.ಬಾಲಕೃಷ್ಣ ಭಟ್, ರಾಜಲಕ್ಷ್ಮಿ ಜೋಷಿ, ಹೆಚ್.ಜಿ.ಮಹೇಂದ್ರ, ಸುಗಮ್, ರಾಜಗೋಪಾಲ ಜೋಷಿ, ಶಿವರಾಮ್ ರಾಗಿಹಳ್ಳಿ, ವಿಶಾಲ್ ನೋಟದ, ಮತ್ತು ಹೆಚ್.ಎಸ್.ರಾಘವ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು.
ಇನ್ನರ್ವೀಲ್ ಸಂಸ್ಥೆಯ ಅಧ್ಯಕ್ಷರಾಗಿ ಸಂಧ್ಯಾ ರಿತೇಶ್,ಕಾರ್ಯದರ್ಶಿ ಟಿ.ನಳಿನಾಕ್ಷಿ, ಖಜಾಂಚಿ ಕವಿತಾ ಸತ್ಯೇಂದ್ರ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ವೈಶಾಲಿ ಜೋಯಿಸ್, ಡಾ.ಮಾಳವಿಕ ಪ್ರಭು, ಶ್ರೀವಾಣಿ ಸುಗಮ್, ಲೀಲಾ ಶ್ರೀಕಾಂತ್, ಸುಜಾತಾ ಬಾಲಕೃಷ್ಣ ಅಧಿಕಾರ ಸ್ವೀಕರಿಸಿದರು.
ರೋಟರಿ ನಿರ್ಗಮಿತ ಅಧ್ಯಕ್ಷ ಬಿ.ಆರ್.ಪ್ರಸನ್ನ, ಇನ್ನರ್ವೀಲ್ ನಿರ್ಗಮಿತ ಅಧ್ಯಕ್ಷೆ ಕವಿತಾ ಪ್ರಕಾಶ್ ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.