ಕಳಸ ಲೈವ್ ವರದಿ
ಜೂನ್ ತಿಂಗಳಿನಲ್ಲಿ ಮಂಕಾಗಿದ್ದ ಮುಂಗಾರು ಮಳೆ ಜುಲೈ ತಿಂಗಳಿನಲ್ಲಿ ಸ್ವಲ್ಪ ಬಿರುಸು ಕಾಣತೊಡಗಿದೆ.ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.
ಮಂಗಳವಾರ ರಾತ್ರಿ ಮಳೆಯ ಜೊತೆ ಸಾದಾರಣ ಗಾಳಿ ಇದ್ದ ಪರಿಣಾಮ ಬುಧವಾರ ಬೆಳಗ್ಗಿನ ಜಾವ ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಖನಕೊಳಲು ಕೆರೆಕುಡಿಗೆ ನಾಗರತ್ನ ಎಂಬುವವರ ಮನೆ ಮೇಲೆ ಮರ ಬಿದ್ದು ಮನೆ ಭಾಗಶಃ ಹಾನಿಯಾಗಿದೆ.
ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷ ಜಗದೀಶ್ ಭಂಡಾರಿ, ರೆವಿನ್ಯೂ ಇನ್ಸ್ಪೆಕ್ಟರ್ ಅಜ್ಜೇಗೌಡ, ವಿಎ ಪ್ರದೀಪ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.