ಕಳಸ ಲೈವ್ ವರದಿ
ಕಳಸದ ಸರ್ಕಾರಿ ಪ್ರಥಮ ದರ್ಜೇ ಕಾಲೇಜು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಾಳಜಿಯೊಂದಿಗೆ ಆದುನಿಕ ಮತ್ತು ಗುಣಮಟ್ಟದ ಬೋಧನೆಗೆ ಆಧ್ಯತೆ.
ಯಾವುದೇ ದೇಶದ ಜನರು ಉತ್ತಮ ಶಿಕ್ಷಣವನ್ನು ಪಡೆದು ಉದ್ಯೋಗ ಕೌಶಲ್ಯವನ್ನು ಹೊಂದಿದ್ದಾಗ ಮಾತ್ರ ಅಲ್ಲಿನ ಮಾನವ ಸಂಪನ್ಮೂಲವು ಆ ದೇಶದ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಭಾರತವು ಅಭಿವೃದ್ಧಿ ಹೊಂದಿರುತ್ತಿರುವ ದೇಶ, ಐರೋಪ್ಯ ದೇಶಗಳಿಗೆ ಹೋಲಿಸಿದರೆ ಇಲ್ಲಿ ಜನ ಸಂಖ್ಯೆಯೂ ಹೆಚ್ಚು, ಐತಿಹಾಸಿಕ ಕಾರಣದಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಬಹಳವೇ ಇವೆ. ಆರ್ಥಿಕವಾಗಿ ಸ್ಥಿತಿವಂತರಲ್ಲದ ಕುಟುಂಬಗಳ ಏಳಿಗೆಗೆ ಉತ್ತಮ ಶಿಕ್ಷಣ ಮಾತ್ರವೇ ಏಕಮಾತ್ರ ಬಂಡವಾಳ. ಹಾಗಾಗಿಯೇ ಇಂದು ಸರ್ಕಾರ ಗ್ರಾಮ ಮಟ್ಟದಲ್ಲೂ ಪದವಿ ಕಾಲೇಜುಗಳನ್ನು ಸ್ಥಾಪಿಸಿ ಜನರು ಉನ್ನತ ಶಿಕ್ಷಣಕ್ಕಾಗಿ ಹೆಚ್ಚು ಹಣವನ್ನು ಖರ್ಚುಮಾಡುವುದು, ಸಾಲ ಮಾಡುವುದು ಅಥವಾ ಹಣದ ಕಾರಣಕ್ಕೆ ಉನ್ನತ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಿದೆ. ಇಂದು ಸುಮಾರು 400 ಕ್ಕೂ ಹೆಚ್ಚು ಸರ್ಕಾರಿ ಪದವಿ ಕಾಲೇಜುಗಳು ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ವ್ಯಾಪ್ತಿಯಲ್ಲಿ ರಾಜ್ಯಾದ್ಯಂತ ಸ್ಥಾಪಿಸಲ್ಪಟ್ಟಿವೆ. ಇದರಲ್ಲಿ ಬಹುಪಾಲು ಕಾಲೇಜುಗಳು ಕೇಂದ್ರ ಸರ್ಕಾದ ಯು.ಜಿ.ಸಿ ಅಡಿಯಲ್ಲಿ ಬರುವ ನ್ಯಾಕ್ ಮಾನ್ಯತೆಯನ್ನು ಪಡೆದುಕೊಂಡಿವೆ. ನ್ಯಾಕ್ ಮಾನ್ಯತೆಯನ್ನು ನೀಡುವಾಗ ಒಂದು ಶೈಕ್ಷಣಿಕ ಸಂಸ್ಥೆಯಲ್ಲಿನ ಮೂಲಸೌಕರ್ಯ, ಪಠ್ಯಕ್ರಮ, ಅಧ್ಯಾಪಕ ಮತ್ತು ವಿದ್ಯಾರ್ಥಿಗಳ ಗುಣಮಟ್ಟವನ್ನು ಬಹು ಆಯಾಮಗಳಿಂದ ಅವಲೋಕಿಸಿ ನಿರ್ಧರಿಸಲಾಗುತ್ತದೆ. ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ನ್ಯಾಕ್ ನಿಂದ ಮೌಲ್ಯಮಾಪನಕ್ಕೊಳಪಡುವುದನ್ನು ಕಡ್ಡಾಯಗೊಳಿಸಲಾಗಿದೆ. ಜೊತೆಗೆ ಯು.ಜಿ.ಸಿ ನೀಡುವ 2ಎಫ್ ಮತ್ತು 12ಬಿ ಮಾನ್ಯತೆಯನ್ನು ಪಡೆಯುವುದು ಸಹ ಪ್ರಸ್ತುತ ಅವಶ್ಯವಿದೆ.
2007-08ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಾರಂಭಗೊಂಡ ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೇಲೆ ತಿಳಿಸದ ಎಲ್ಲಾ ಶೈಕ್ಷಣಿಕ ಮಾನ್ಯತೆಗಳನ್ನು ಹೊಂದಿದೆ. ಪ್ರಸ್ತುತ ಸರ್ಕಾರದಿಂದ ಮಂಜೂರಾದ ಸುಮಾರು 5 ಎಕರೆಯಷ್ಟು ವಿಶಾಲವಾದ ಜಮೀನಿನಲ್ಲಿ ನಿರ್ಮಿಸಲಾಗಿರುವ ಸುಸ್ಸಜ್ಜಿತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಿ.ಎ ಮತ್ತು ಬಿ.ಕಾಂ ಪದವಿ ಕೋರ್ಸುಗಳು ಇಲ್ಲಿ ವ್ಯಾಸಂಗಕ್ಕೆ ಲಭ್ಯವಿದೆ. ಒಂದು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿರುವ ಈ ಸಂಸ್ಥೆಯನ್ನು ಎಲ್ಲರ ಸಹಕಾರದಿಂದ ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗಲಾಗುತ್ತಿದೆ.
ಸುಂದರವಾದ ಹಸಿರು ಪರಿಸರದಲ್ಲಿರುವ ಈ ಕಾಲೇಜಿಗೆ ಶೈಕ್ಷಣಿಕ ವಾತಾವರಣವನ್ನು ಹೊಂದಲು ಇಲ್ಲಿನ ಪ್ರಾಕೃತಿಕ ಸೌಂದರ್ಯದ ಕೊಡುಗೆಯೇ ಬಹಳವಿದೆ. ಇಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತಿದ್ದು, ಕ್ಯಾಂಪಸ್, ತರಗತಿ ಕೊಠಡಿಗಳು, ಸಭಾಂಗಣ ಮತ್ತು ಶೌಚಾಲಯಗಳನ್ನು ಬಹಳ ಸ್ವಚ್ಛವಾಗಿ ನಿರ್ವಹಿಸಲಾಗಿದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೂ ಆಗಾಗ್ಗೆ ಸ್ಪಚ್ಛತಾ ತರಬೇತಿಗಳನ್ನು ನೀಡಲಾಗುತ್ತಿರುತ್ತದೆ. ಸುಮಾರು 30 ಕಂಪ್ಯೂಟರ್ ಗಳಿರುವ ಸುಸ್ಸಜ್ಜಿತ ಕಂಪ್ಯೂಟರ್ ಲ್ಯಾಬ್ ಅನ್ನು ಹೊಂದಿದ್ದು, ನುರಿತ ಶಿಕ್ಷಕರಿಂದ ಉಚಿತವಾಗಿ ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಶ್ರೀ ಕ್ಷೇತ್ರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯದಿಂದ ಉಚಿತವಾಗಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಸುಮಾರು 4 ವರ್ಷಗಳಿಂದ ಒದಗಿಸಲಾಗುತ್ತಿದೆ. 9 ಖಾಯಂ ಅಧ್ಯಾಪಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 12 ಜನ ಅತಿಥಿ ಉಪನ್ಯಾಸಕರು ಸೇರಿದಂತೆ ಒಟ್ಟು 21 ಜನ ನುರಿತ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಸಂಪೂರ್ಣ ಗಣಕೀಕೃತಗೊಂಡಿರುವ ಕಾಲೇಜು ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟಂತಹ ಪುಸ್ತಕಗಳು ಸೇರಿದಂತೆ ಸುಮಾರು 9000 ಕ್ಕೂ ಹೆಚ್ಚು ಪುಸ್ತಕಗಳು, ಇ-ಜರ್ನಲ್ ಗಳು ವಿದ್ಯಾರ್ಥಿಗಳ ಬಳಕೆಗೆ ಲಭ್ಯವಿದೆ.
ಪ್ರಸ್ತುತ ಕಾಲಮಾನಕ್ಕನುಗುಣವಾಗಿ ಪದವಿ ವ್ಯಾಸಂಗಕ್ಕೆ ಮಾತ್ರವೇ ವಿದ್ಯಾರ್ಥಿಗಳನ್ನು ಸೀಮಿತಗೊಳಿಸದೆ ಅವರಲ್ಲಿ ಉದ್ಯೋಗ ಕೌಶಲ್ಯವನ್ನು ವೃದ್ಧಿಸುವಂತ ಕಾರ್ಯಾಗಾರಗಳನ್ನು ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ಪ್ರತಿವರ್ಷ ನಡೆಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿರುವ ಸಂಸ್ಥೆಯು ಆಗಾಗ್ಗೆ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳ ಸಹಯೋಗದಲ್ಲಿ ವೈಧ್ಯಕೀಯ ತಪಾಸಣ ಶಿಬಿರವನ್ನು ಆಯೋಜಿಸುತ್ತಿರುತ್ತದೆ. ಉತ್ತಮವಾದ ಕಾಲೇಜು ಆಟದ ಮೈದಾನ ಹೊಂದುವುದರೊಂದಿಗೆ ಕ್ರೀಡೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ಕ್ರೀಡಾ ಕೂಟದಲ್ಲಿ ಭಾಗವಹಿಸುವಿಕೆಗೆ ಪ್ರೋತ್ಸಾಹವಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಾಲೇಜಿನಲ್ಲಿ ಕ್ಯಾಂಟೀನ್ ಅನ್ನು ಪ್ರಾರಂಭಿಸಲಾಗಿದೆ. ಸಾಂಸ್ಕøತಿಕ ಚಟುವಟಿಕೆಗಳಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಜಾನಪದ ಕಲೆಗಳ ತರಬೇತಿ ಶಿಬಿರಗಳನ್ನು ಕಾಲೇಜಿನಲ್ಲಿ ಆಯೋಜಿಸಲಾಗುತ್ತಿರುದೆ. ಪದವಿ ನಂತರ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕುವಂತಾಗಲು ಹಲವು ಉದ್ಯೋಗದಾತರನ್ನು ಕಾಲೇಜಿನ ಉದ್ಯೋಗಕೋಶವು ನಿರಂತರ ಸಂಪರ್ಕದಲ್ಲಿರಿಸಿಕೊಂಡಿದೆ. ವಿದ್ಯಾರ್ಥಿ ಕೇಂದ್ರಿತ ಚಟುವಟಿಕೆಗಳಲ್ಲಿ ಪೋಷಕರ ಭಾಗವಹಿಸುವಿಕೆ ಹೆಚ್ಚಾಗುವಂತೆ ಮಾಡಲು ಪೋಷಕರ ಮತ್ತು ಅಧ್ಯಾಪಕರ ವೇದಿಕೆಗಳನ್ನು ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಗೆ ಅನುಕೂಲವಾಗುವಂತೆ ಕಾಲೇಜು ಕ್ಯಾಂಪಸ್ ಮತ್ತು ತರಗತಿ ಕೊಠಡಿಗಳಲ್ಲಿ ಸಂಪೂರ್ಣವಾಗಿ ಸಿ.ಸಿ.ಟಿವಿ ಅಳವಡಿಸಲಾಗಿದೆ. ನಿರಂತರ ವಿದ್ಯುತ್ ಪೂರೈಕೆ ಮತ್ತು ಹಸಿರು ಇಂಧನದ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೌರವಿದ್ಯುತ್ ಘಟಕವನ್ನು ಕಾಲೇಜು ಹೊಂದಿದೆ. ಅಭಿವೃದ್ಧಿ ಹೊಂದುತ್ತಿರುವ ಕಾಲೇಜು ಉಧ್ಯಾನವನ, ನಿರಂತರ ಮತ್ತು ಶುದ್ಧ ಕುಡಿಯುವ ನೀರಿನ ಪೂರೈಕೆ, ನೈರ್ಮಲ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹಿಳಾ ಶೌಚಾಲಯದಲ್ಲಿ ಸ್ಯಾನಿಟರಿ ಬರ್ನರ್ ಅಳವಡಿಕೆ, ಆದುನಿಕ ಶಿಕ್ಷಣ ವಿಧಾನವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾ ತರಗತಿಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಹಾಗೂ ಅಂಗವಿಕಲ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಶೌಚಾಲಯಗಳನ್ನು ಕಾಲೇಜು ಹೊಂದಿದೆ.
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸದಾ ಕಾಳಜಿಯನ್ನು ಹೊಂದಿರುವ ಸಂಸ್ಥೆಯು ಪ್ರತಿದಿನ ನುರಿತ ಯೋಗ ಗುರುಗಳಿಂದ ಯೋಗಾಸನವನ್ನು ಪಠ್ಯದ ಭಾಗವಾಗಿ ಕಲಿಸಲಾಗುತ್ತಿದೆ. ಮಲ್ಟಿ ಜಿಮ್ ಸೌಲಭ್ಯವನ್ನು ಹೊಂದಿದ್ದು ಆಸಕ್ತ ವಿದ್ಯಾರ್ಥಿಗಳನ್ನು ಜಿಮ್ ಬಳಕೆ ಮಾಡುವುದನ್ನು ಪ್ರೋತ್ಸಾಹಿಸಲಾಗುತ್ತದೆ.
ಎನ್.ಎಸ್.ಎಸ್, ರೋವರ್ಸ್-ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನು ನೇಮಿಸಿಕೊಂಡು ಸೇವಾ ಮಾನೋಭಾವ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಲು ಪ್ರೇರೇಪಿಸಲಾಗುತ್ತಿದೆ. ಎಲ್ಲಾ ವರ್ಷದ ವಿದ್ಯಾರ್ಥಿಗಳಲ್ಲಿ ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸುವುದೊಂದಿಗೆ, ಕಾಲೇಜನ್ನು ರಾಗಿಂಗ್ ಮುಕ್ತವಾಗಿಡಲಾಗಿದೆ.
ಪದವಿ ವ್ಯಾಸಂಗವನ್ನು ಕೇವಲ ಪಠ್ಯ ವಿಷಯಕ್ಕೆ ಮಾತ್ರ ಸೀಮಿತಗೊಳಿಸದೇ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸಕ್ಕೂ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಕಾಲೇಜಿನ ಹೆಗ್ಗಳಿಕೆಯಾಗಿದೆ. ಹೀಗಿದ್ದಾಗಿಯೂ ಪಲಿತಾಂಶದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಶೇಕಡಾ 85ಕ್ಕೂ ಹಚ್ಚಿನ ಫಲಿತಾಂಶವನ್ನು ಹಿಂದಿನ ಪ್ರತಿ ಶೈಕ್ಷಣಿಕ ಸಾಲಿನಲ್ಲಿಯೂ ಪಡೆದುಕೊಂಡು ಬರುತ್ತಿರುವುದು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಹಿಸಿರುವ ಶ್ರಮದಿಂದಾಗಿಯೇ ಆಗಿದೆ. ಕಾಲೇಜಿನಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ನಿಯಂತ್ರಣದಲ್ಲಿಟ್ಟು ಕೊಳ್ಳುಬಹುದಾದ, ಸೌಲಭ್ಯ ಮತ್ತು ಅವಕಾಶಗಳನ್ನು ಸಮಾನವಾಗಿ ನೀಡಲು ಸಹಕಾರಿಯಾಗುವ ಮಟ್ಟದಲ್ಲಿರುವುದು ಇಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಹಿಸಲು ಅನುಕೂಲಕರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಉತ್ತಮ ಬಾಂಧವ್ಯವಿದ್ದು, ಇದು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗುತ್ತಿದೆ. ಪರಸ್ಪರ ಅನ್ಯೋನ್ಯತೆ, ಅಧ್ಯಾಪಕರಲ್ಲಿನ ಕಲಿಸುವ ಆಸಕ್ತಿ ಇತ್ತೀಚೆಗೆ ನಡೆದ ಕಾಲೇಜಿನ ಮರುಮೌಲ್ಯಮಾಪನದಲ್ಲಿ ಕಾಲೇಜಿಗೆ ಪ್ರತಿಷ್ಠಿತ ನ್ಯಾಕ್ ಎ ಶ್ರೇಣಿಯ ಮಾನ್ಯತೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ಈ ಸಾಧನೆಯನ್ನು ಮಾಡಲು ಸಾಧ್ಯವಾಗಿವುದು ಕರ್ನಾಟಕದ ಕೇವಲ 23 ಸರ್ಕಾರಿ ಕಾಲೇಜುಗಳಿಗೆ ಮಾತ್ರ ಎಂಬುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟವನ್ನು ಪ್ರತಿಭಿಂಬಿಸುತ್ತದೆ. ಈ ಸಂಸ್ಥೆಯ ಬೋಧಕವರ್ಗದ ಶ್ರಮ, ವಿದ್ಯಾರ್ಥಿಗಳಲ್ಲಿ ಕಾಲೇಜಿನ ಬಗ್ಗೆ ಇರುವ ಗೌರವ, ವಿದ್ಯಾರ್ಥಿ ಪೊಷಕರು, ಸ್ಥಳೀಯ ಜನಪ್ರತಿನಿಧಿಗಳು ಮತ್ತು ಊರಿನವರಿಗೆ ಕಾಲೇಜಿನ ಬಗ್ಗೆ ಇರುವ ಆಸಕ್ತಿ ಕಾಲೇಜು ಪ್ರಾರಂಭಗೊಂಡ ಕೆಲವೇ ವರ್ಷಗಳಲ್ಲಿ ಈ ಮಟ್ಟದ ಸಾಧನೆ ತೋರಲು ಸಾಧ್ಯವಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ಥಾಪಿಸಲಾಗಿರುವ ಈ ಶೈಕ್ಷಣಿಕ ಸಂಸ್ಥೆಯು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಉತ್ತಮ ನಿರ್ವಹಣೆಯನ್ನೂ ಹೊಂದಿದೆ. ಹಾಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಪದವಿ ಶಿಕ್ಷಣವನ್ನು ಹೊಂದಲು ಸ್ಥಳೀಯ ವಿದ್ಯಾರ್ಥಿಗಳಿಗೆ ಇದಕ್ಕಿಂತ ಉತ್ತಮ ಆಯ್ಕೆ ಇರಲಾರದು ಎಂಬ ಭರವಸೆಯನ್ನು ಸಂಸ್ಥೆಯು ಪೋಷಕರಿಗೆ ಕೊಡುತ್ತದೆ.
ಪದವಿ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಕೂಡಲೇ ಕಾಲೇಜು ಕಛೇರಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ: 08263 295233, ಪ್ರಾಂಶುಪಾಲರ ಮೊಬೈಲ್ ಸಂಖ್ಯೆ: 9844247398