ಕಳಸ ಲೈವ್ ವರದಿ
ನೇತ್ರಾವತಿ ಶಿಖರಕ್ಕೆ ಚಾರಣಕ್ಕೆ ಹೋದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಮೃತ ಪಟ್ಟ ವ್ಯಕ್ತಿ ಮೈಸೂರು ಜೆಪಿ ನಗರದ ರಕ್ಷಿತ್ (27) ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಿಗ್ಗೆ ರಕ್ಷಿತ್ ಸೇರಿ ಒಟ್ಟು ಆರು ಜನರ ತಂಡ ಸಂಸೆ ಮಾರ್ಗವಾಗಿ ನೇತ್ರಾವತಿ ಶಿಖರಕ್ಕೆ ಚಾರಣ ಕೈಗೊಂಡಿದ್ದರು. ಶಿಖರದಲ್ಲಿ ಮದ್ಯಾಹ್ನದ ಸಮಯಕ್ಕೆ ರಕ್ಷಿತ್ ಗೆ ಎದೆ ನೋವು ಕಾಣಿಸಿಕೊಂಡಿದೆ. ತೀರ ಎದೆ ನೋವು ಕಾಣಿಸಿಕೊಂಡಿದ್ದ ರಕ್ಷಿತ್ಗೆ ಹೃದಐಆಘಾತವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಸ್ಥಳೀಯರ ನೆರವಿನಿಂದ ಮೃತದೇಹವನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ತರಲಾಗಿದೆ.
ಮೃತ ವ್ಯಕ್ತಿ ಇತ್ತೀಚೆಗಷ್ಟೆ ಎಂಬಿಬಿಎಸ್ ಮುಗಿಸಿದ್ದ ಎನ್ನಲಾಗಿದೆ.