ಕಳಸ ಲೈವ್ ವರದಿ
ವ್ಯಕ್ತಿ ವ್ಯಕ್ತಿಗತವಾಗಿ ನಾವು ವ್ಯಕ್ತಿತ್ವವನ್ನು ಹೇಗೆ ಬೆಳೆಸಿಕೊಳ್ಳುತ್ತೇವೆಯೋ ಅದರ ಮೇಲೆ ನಮ್ಮ ಜೀವನ ಅವಲಂಬಿಸಿದೆ ಎಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ರಾಜಲಕ್ಷ್ಮೀ ಬಿ ಜೋಷಿ ಹೇಳಿದರು.
ಸಂಸೆ ಕೇಂದ್ರ ವಾಲ್ಮಿಕಿ ಆಶ್ರಮ ಶಾಲೆಯಲ್ಲಿ ಗುರುವಾರ ನಡೆದ ಕಳಸ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮತನಾಡಿದ ಅವರು ಮಕ್ಕಳನ್ನು ಶಿಸ್ತು ಬದ್ದವಾಗಿ ಜೀವನದಲ್ಲಿ ಒಳ್ಳೆಯ ಸಂಸ್ಕಾರಯುತರನ್ನಾಗಿ ಉತ್ತಮ ದಾರಿಯಲ್ಲಿ ಕರೆದುಕೊಂಡು ಹೋಗಲು ರಾಷ್ಟ್ರೀಯ ಸೇವಾ ಯೋಜನೆ ಅತ್ಯವಶ್ಯಕವಾಗಿದೆ.ಈ ಶಿಬಿರಗಳು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರ ಮತ್ತು ಜೀವನಕ್ಕೆ ಒಳ್ಳೆಯ ಪಾಠವನ್ನು ಕಲಿಸಿಕೊಡುತ್ತದೆ.ತೃಪ್ತಿದಾಯಕ ಜೀವನವನ್ನು ನಾವು ನಡೆಸಬೇಕು.ತ್ಯಾಗ ಮತ್ತು ಸೇವೆಯಿಂದ ಸಿಗುವ ತೃಪ್ತಿ ಯಾವ ಸಿರಿವಂತಿಕೆಯಿಂದಲೂ ಸಿಗೋದಿಲ್ಲ. ಆದರೆ ಇಂದಿನ ಶಿಕ್ಷಣ ಕ್ರಮ ಕೇವಲ ಹಣ ಸಂಪಾದನೆ ಮಾಡುವ ಶಿಕ್ಷಣ ಕ್ರಮವಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ಮಾತನಾಡಿ ಕಳೆದ ಏಳು ದಿನಗಳಿಂದ ನಡೆಯುತ್ತಿರುವ ಶಿಬಿರಕ್ಕೆ ಊರಿನ ಜನರ ಸಹಕಾರ ಸಾಕಷ್ಟಿದೆ. ಈ ಶಿಬಿರವು ವಿದ್ಯಾರ್ಥಿಗಳಿಗೆ ಸಾಕಷ್ಟು ಒಳ್ಳೆಯ ಜೀವನ ಕ್ರಮವನ್ನು ತಿಳಿಸಿಕೊಟ್ಟಿದೆ. ಇದು ಇಲ್ಲಿಗೆ ಮುಗಿದು ಹೋಗದೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಆತ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯೆ ಜಲಜಾಕ್ಷಿ, ಪೋಷಕರ ಸಮಿತಿ ಉಪಾಧ್ಯಕ್ಷ ಸುರೇಶ್ ಕೆ.ಎನ್, ಕಾರ್ಯದರ್ಶಿ ದಿನೇಶ್ ಎಡದಾಳು, ಯೋಗ ಗುರು ವೈ. ಪ್ರೇಮ್ ಕುಮಾರ್, ಮುಖಂಡರಾದ ಶ್ರೀಪಾಲಯ್ಯ, ಆರ್.ಕೆ.ಬ್ರಹ್ಮದೇವ, ಧರಣೇಂದ್ರ, ಆಶ್ರಮ ಶಾಲೆ ಮುಖ್ಯ ಶಿಕ್ಷಕಿ ಹೇಮಲತ, ರಾ.ಸೇ.ಯೋ ಕಾರ್ಯಕ್ರಮ ಸಂಯೋಜಕ ವಿಶು ಕುಮಾರ್, ಕಾರ್ಯಕ್ರಮಾಧಿಕಾರಿ ಸುಧೀರ್ ಜೈನ್ ಇದ್ದರು.