ಕಳಸ ಲೈವ್ ವರದಿ
ಕಳಸ ಜೆ.ಸಿ.ಐ ಸಹಯೋಗದಲ್ಲಿ ಜೂನ್ 16 ರಂದು ಪುಷ್ಪಕ ಯಾನ ಎಂಬ ಏಕವ್ಯಕ್ತಿ ಯಕ್ಷಗಾನ ಕಳಸದ ದುರ್ಗಾ ಮಂಟಪದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ.
ಝಿ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಯಕ್ಷ ಹಾಸ್ಯ ಕಲಾವಿದ ಮಹಾಬಲೇಶ್ವರ ಭಟ್ ಕ್ಯಾದಗಿ ಯವರ ಎರಡು ಗಂಟೆಯಲ್ಲಿ ಒಂದು ಪುರಾಣ ಕಥೆಯನ್ನು ರಂಜನಾತ್ಮಕವಾಗಿ ಹೇಳುವ ಒಂದು ಹೊಸ ಪ್ರಯೋಗವನ್ನು ಕಳಸದಲ್ಲಿ ನಡೆಸಿಕೊಡಲಿದ್ದಾರೆ.
ಗಾನ ಸಾರಥ್ಯವನ್ನು ಪ್ರಸನ್ನ ಭಟ್ ಬಾಳ್ಕಲ್, ಬೆಪ್ಡಿ ಗಣಪತಿ ಶೆಟ್ಟಿ, ಗೀತ ಸಾಹಿತ್ಯ ದೇವದಾಸ್ ಈಶ್ವರಮಂಗಲ, ಮದ್ದಳೆ ಎನ್.ಜಿ.ಹೆಗ್ಡೆ, ಚಂಡೆ ರಾಕೇಶ್ ಮಲ್ಯ ಹಳ್ಳಾಡಿ.
ಪ್ರವೇಶ ಉಚಿತವಾಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಂದು ಕಳಸ ಜೆಸಿಐ ಅಧ್ಯಕ್ಷ ಚರಣ್ ತಿಳಿಸಿದ್ದಾರೆ.