ಕಳಸ ಲೈವ್ ವರದಿ
ಮೈ ನೇಮ್ ಈಸ್ ಅಣ್ಣಪ್ಪ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು,ಗರುಡ ಗಮನ ವೃಷಭ ವಾಹನ ಎಂಬ ಯಶಸ್ವಿ ಚಿತ್ರಗಳನ್ನು ನೀಡಿದ ಕಳಸದ ಉಧ್ಯಮಿ ಬಿ.ವಿ.ರವಿ ರೈ ಅವರ ಅಗಸ್ತ್ಯ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಹುಟ್ಟು ಹಾಕಿ ಅದರ ಲಾಂಛನವನ್ನು ಬಿಡುಗಡೆಗೊಳಿಸಿದ್ದಾರೆ.
ಈ ಹಿಂದೆ ಲೈಟರ್ ಬುದ್ದ ಫಿಲ್ಮ್ ಎಂಬ ನಿರ್ಮಾಣ ಸಂಸ್ಥೆಯೊಂದಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದು ಇದೀಗ ತನ್ನದೇ ಆದ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.
ಇವರ ಮೊದಲ ಚಿತ್ರ ಮೈನೇಮ್ ಈಸ್ ಅಣ್ಣಪ್ಪ. ರಾಜ್ ಬಿ ಶೆಟ್ಟಿ ಹಾಗೂ ಲೈಟರ್ ಬುದ್ದ ಫಿಲ್ಮ್ ಭಾಂದವ್ಯ ಶುರುವಾಗಿ ಅದು ಮುಂದುವರೆದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ “ಗರುಡ ಗಮನ ವೃಷಭ ವಾಹನ” ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಗೆ ರವಿ ರೈ ಅವರದ್ದು.
ಕರೋನದ ಬಿಸಿ ಇವರ ವಯಕ್ತಿಕ ಉದ್ಯಮಕ್ಕೆ ತಟ್ಟಿದ ಹಿನ್ನಲೆಯಲ್ಲಿ ಒಂದು ಬಾರಿ ಸಿನೆಮಾ ರಂಗದಿಂದ ದೂರ ಉಳಿಯಬೇಕೆಂದುಕೊಂಡ ರೈಗಳಿಗೆ ಬೆನ್ನೆಲುಬಾಗಿ ನಿಂತವರು ಒಂದು ಮೊಟ್ಟೆ ಖ್ಯಾತಿಯ ರಾಜ್ ಬಿ ಶೆಟ್ಟಿ. ರವಿ ರೈ ಅವರನ್ನು ನಂಬಿ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಭಾಗಿಯಾಗಲು ಅವಕಾಶ ಮಾಡಿ ಕೊಟ್ಟು ಭರ್ಜರಿ ಯಶಸ್ಸನ್ನು ಕೂಡ ಕಂಡುಕೊಂಡರು.
ಸ್ವತಃ ಬಿ.ವಿ.ರವಿ ರೈ ಅವರು ಹೇಳುವಂತೆ ಅಗಸ್ತ್ಯ ಫಿಲ್ಮ್ ನಿರ್ಮಾಣ ಸಂಸ್ಥೆ ಅದೊಂದು ನನ್ನ ಕನಸಿನ ಕೂಸು ಇದಕ್ಕೆ ರಾಜ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಅವರ ಬಹುದೊಡ್ಡ ಸಹಕಾರ ಇದೆ. ಇನ್ನು ಮುಂದೆ ಅಗಸ್ತ್ಯ ಫಿಲ್ಮ್ ಹಾಗೂ ಲೈಟರ್ ಬುದ್ದ ಪಿಲ್ಮ್ ಜೊತೆಗೂಡಿ ಚಿತ್ರವೊಂದನ್ನು ಅತೀ ಶೀಘ್ರದಲ್ಲಿ ಘೋಷಿಸಲಿದ್ದೇವೆ. ಅಗಸ್ತ್ಯ ಫಿಲ್ಮ್ ಯಾವತ್ತಿಗೂ ಲೈಟರ್ ಬುದ್ದ ಪಿಲ್ಮ್ ನ ಒಂದು ಅಂಗ ಸಂಸ್ಥೆ ಎನ್ನುವುದು ನನಗೆ ಖುಷಿ ತರುತ್ತೆ.
ನನ್ನ ಅಗಸ್ತ್ಯ ಪಿಲ್ಮ್ ನಿರ್ಮಾಣ ಸಂಸ್ಥೆಯ ಲಾಂಚನವನ್ನು ಕಳಸ ಶ್ರೀ ಕಲಶೇಶ್ವರ ಸ್ವಾಮಿಯವರ ಜೀರ್ಣಾಷ್ಠಬಂಧ ಮತ್ತು ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮದ ದಿನದಂದೆ ಬಿಡುಗಡೆ ಮಾಡುತ್ತಿರುವುದು ಕೂಡ ತುಂಬಾ ಕುಷಿಯನ್ನು ತಂದುಕೊಟ್ಟಿದೆ. ರಾಜ್ ಬಿ ಶೆಟ್ಟಿ, ಪ್ರವೀಣ್ ಶ್ರಿಯಾನ್ ಹಾಗು ಲೈಟರ್ ಬುದ್ದ ಸಿನಿ ತಂಡಕ್ಕೆ ಸದಾ ನಾನು ಚಿರಋಣಿಯಾಗಿರುತ್ತೇನೆ ಎಂದು ರವಿ ರೈ ತನ್ನ ಮನದಾಳದ ಮಾತುಗಳನ್ನು ಹೇಳುತ್ತಾರೆ.