ಕಳಸ ಲೈವ್ ವರದಿ
ವಿಶ್ವ ಪರಿಸರ ದಿನವನ್ನು ಕಳಸ ಜೇಸಿಐ ವತಿಯಿಂದ ಗಿಡ ನೆಡುವುದರ ಮೂಲಕ ಆಚರಿಕೊಳ್ಳಲಾಯಿತು.
ತೋಟಗಾರಿಕಾ ಇಲಾಖೆಯ ಸಹಯೋಗದೊಂದಿದೆ ವಿವಿಧ ಹಣ್ಣಿನ ಹಾಗು ತೆಂಗಿನ ಗಿಡಗಳು ತೋಟಗಾರಿಕ ಸಸ್ಯ ಕ್ಷೇತ್ರದ ಆವರಣದಲ್ಲಿ ನೆಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಐ ಅಧ್ಯಕ್ಷ ಚರಣ್ ಪರಿಸರ ಸಮತೋಲನ ಕಾಪಡುವಲ್ಲಿ ಎಲ್ಲರ ಪಾತ್ರ ಬಹಳ ಮುಖ್ಯ. ಗಿಡಗಳನ್ನು ನೆಡುವುದರೊಂದಿಗೆ ಅದರ ಪೋಷಣೆ ಅತಿ ಮುಖ್ಯ.ಈ ಮೂಲಕ ಪರಿಸರ ಕಲಾಜಿ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಳಸ ಜೇಸಿಐ ಸ್ಥಾಪಕ ಅಧ್ಯಕ್ಷರಾದ ಜೇಸಿ ಜಗದೀಶ್ ನಾಯ್ಕ್, ಕಾರ್ಯದರ್ಶಿ ಶ್ರೀಕಾಂತ್ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿ ರಾದೇಶ್ ಹಾಗೂ ಕಳಸ ಜೇಸಿಐನ ಸದಸ್ಯರುಗಳಾದ ಮುರುಳಿ,ಸುಧಾಕರ್ ಇತರರು ಇದ್ದರು.