ಕಳಸ ಲೈವ್ ವರದಿ
ಕಳಸ ಜೆಸಿಐ ಆತಿಥ್ಯದಲ್ಲಿ ವಲಯ ಹಂತದ ಚಾರಣ ಕಾರ್ಯಕ್ರಮವನ್ನು
ಜೂನ್ 3 ಮತ್ತು 4 ರಂದು ನಡೆಸಲಯಿತು.
ಹೊರನಾಡಿನ ಪರಂಪರ ರೆಸಾರ್ಟ್ನಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಜೂನ್ ಮೂರಂದು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ವಲಯ 14 ರ ಪೂರ್ವ ವಲಯ ಅಧ್ಯಕ್ಷರಾದ ಜೇಸಿ ದೇವಿಪ್ರಸಾದ್ ಕಯಾರ್ ಮಾರ್ ಭಾಗವಹಿಸಿದ್ದು , ಜೇಸಿ ಶೇಖರ್ ಬೆಳ್ಳುಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಲಯ 14 ರ ವಲಯಾಧ್ಯಕ್ಷೆ ಜೇಸಿ ಯಶಸ್ವಿನಿ ಹಾಗೂ ಉಪಾಧ್ಯಕ್ಷರಾದ ಜೇಸಿ ನೆಲ್ಸನ್ ಡಿಸೋಜ ಭಾಗವಹಿಸಿದ್ದರು.
ಜೂನ್ ನಾಲ್ಕರಂದು ನಡೆದ ಚಾರಣದಲ್ಲಿ ವಿವಿಧ ಘಟಕಗಳ ಸುಮಾರು 65 ಚಾರಣಿಗರು ಖ್ಯಾತನಮಕ್ಕಿ ಶಿಖರಕ್ಕೆ ಚಾರಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಳಸ ಜೆಸಿಐ ಅಧ್ಯಕ್ಷ ಚರಣ್ ಬಂಡಾರಿ, ನಿಖಟ ಪೂರ್ವ ಅಧ್ಯಕ್ಷ ಹೆಚ್.ಆರ್.ಪ್ರಶಾಂತ್, ಕಾರ್ಯಕ್ರಮ ನಿರ್ದೇಶಕ ಸುಧಾಕರ್, ಪೂರ್ವಾಧ್ಯಕ್ಷರಾದ ಜಗದೀಶ್, ಅಶೋಕ್, ಕೆ.ಸಿ.ಮಹೇಶ್, ಜಿ. ಪ್ರಕಾಶ್ ಕುಮಾರ್, ಕಾರ್ಯದರ್ಶಿ ಶ್ರೀಕಾಂತ್ ಇದ್ದರು.