ಕಳಸ ಲೈವ್ ವರದಿ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂತಾನಹರಣ ಚಿಕಿತ್ಸೆ ನಡೆಸಲು ಬುಧವಾರ ಬಂದಿದ್ದ ವೈದ್ಯರಿಗೆ ಅನಾರೋಗ್ಯ ಉಂಟಾಗಿದೆ ಎಂದು ತಿಳಿಸಲಾಗಿದ್ದು, ತಕ್ಷಣ ಅವರನ್ನು 108 ಅಂಬ್ಯುಲೆನ್ಸ್ ನಲ್ಲಿ ರವಾನಿಸಲಾಯಿತು.ಇತ್ತ ವೈದ್ಯರ ವಿಲಕ್ಷಣ ವರ್ತನೆ ನೆರೆದಿದ್ದ ಜನರಲ್ಲಿ ಹಲವು ಅನುಮಾನ ಮೂಡಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಆಸ್ಪತ್ರೆಯಲ್ಲಿ ಬುಧವಾರ ಸಂತಾನಹರಣ ಕ್ಯಾಂಪ್ ಏರ್ಪಡಿಸಲಾಗಿತ್ತು,ಸುಮಾರು ೧೫ ಮಹಿಳೆಯರು ಚಿಕಿತ್ಸೆಗೆ ಬಂದಿದ್ದರು.ತಿಳಿಸಿದ ಸಮಯದಂತೆ ಎಲ್ಲರೂ ಪುಟ್ಟ ಮಕ್ಕಳೊಂದಿಗೆ ಬೆಳಿಗ್ಗೆ 8ಗಂಟೆಗೆ ಬಂದಿದ್ದರು.ಆದರೆ ಮಧ್ಯಾಹ್ನದವರೆಗೆ ಕಾದಿದ್ದರೂ ಕೂಡ ವೈದ್ಯರು ಬಂದಿರಲಿಲ್ಲ.೩ ಗಂಟೆ ಹೊತ್ತಿಗೆ ಅಪರೇಷನ್ ಮಾಡಿಕೊಳ್ಳಲು ಬಂದಿದ್ದ ಮಹಿಳೆಯರಿಗೆ ಇಂಜೆಕ್ಸನ್ ಕೊಡಲಾಯಿತು.ಇದಾದ ಸ್ವಲ್ಪ ಹೊತ್ತಿನಲ್ಲೇ ಕೆಲವರು ಸುಸ್ತಾಗಿ ವಾಂತಿ ಮಾಡಿಕೊಂಡರು.ಅಷ್ಟೊತ್ತಿಗೆ ಕೊಪ್ಪ ಆಸ್ಪತ್ರೆ ವೈದ್ಯ ಬಾಲಕೃಷ್ಣ ಆಗಮಿಸಿದರು.ತೂರಾಡುತ್ತಲೇ ಬಂದ ವೈದ್ಯರು ಅಪರೇಷನ್ ಮಾಡಲ್ಲ ಎನ್ನುತ್ತ ಕೂತು ಬಿಟ್ಟರು.ಆಗ ಅಲ್ಲಿದ್ದವರು ವೈದ್ಯರು ಕುಡಿದು ಬಂದಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಆಸ್ಪತ್ರೆಯ ವೈದ್ಯ ವಿಜಯ್ ವೈದ್ಯರು ಕುಡಿದು ಬಂದಿಲ್ಲ ಅವರಿಗೆ ಶುಗರ್ ಜಾಸ್ತಿಯಾಗಿದೆ.ಬೇರೆ ವೈದ್ಯರನ್ನು ಕರೆಸಿ ಅಪರೇಷನ್ ಮಾಡಿಸ್ತೀವಿ ಎಂದು ಸಮಜಾಯಿಸಿ ನೀಡಿದರು.
ಇಷ್ಠಾಗುವಾಗಲೇ ಬಾಲಕೃಷ್ಣ ವೈದ್ಯರಿಗೆ ಶುಗರ್ ಜಾಸ್ತಿಯಾಗಿದೆ ಕೂಡಲೇ ಬೇರೆ ಆಸ್ಪತ್ರೆಗೆ ಕಳುಹಿಸಬೇಕು ಎಂದು ಅಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಯಿತು.
ಚಿಕಿತ್ಸೆಗೆ ಬಂದಿದ್ದ ಮಹಿಳೆಯರಿಗೆ ಡ್ರಿಪ್ ಹಾಕ್ಸಿ ಅಲ್ಲಿಯೇ ಉಳಿಸಿಕೊಂಡು ಗುರುವಾರ ಬೆಳಿಗ್ಗೆ ಚಿಕ್ಕಮಗಳೂರಿನಿಂದ ವೈದ್ಯರು ಬಂದು ಅಪರೇಷನ್ ಮಾಡಿದರು.
ಇಲ್ಲಗೆ ಅಪರೇಷನ್ ಮಾಡಲು ಬಂದಿದ್ದ ವೈದ್ಯರು ಕುಡಿದು ತೂರಾಡುತ್ತಾ ಬಂದಿದ್ದಾರೆ.ಅವರು ಕುಡಿದು ಬಂದಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ,ಹುಷಾರಿಲ್ಲ ಎಂಬ ನಾಟಕವಾಡಿ ನಂತರ ಅಂಬ್ಯುಲೆನ್ಸ್ ನಲ್ಲಿ ಕಳುಹಿಸಲಾಗಿದೆ.ಇಂತಹ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು ಹೇರೂರು ನಿವಾಸಿ ಅವಿನಾಶ್ ಆಗ್ರಹಿಸಿದ್ದಾರೆ.