ಕಳಸ ಲೈವ್ ವರದಿ
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರುದ್ರೇಶ್ ಕಹಳೆ ಮಂಗಳವಾರ ಕಳಸ ಪಟ್ಟಣದಲ್ಲಿ ಮತಯಾಚನೆ ಮಾಡಿದರು.
ಪಟ್ಟಣದಲ್ಲಿರುವ ಅಂಗಡಿ, ಹೋಟೇಲು ಹಾಗೂ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿರುವುದು ಸ್ವಚ್ಚ ರಾಜಕಾರಣವೊಂದರ ಬೀಜವನ್ನು ಬಿತ್ತಲು.ಹಣ ಬಲ ಇದ್ದವರು ಹಣದಿಂದಲೇ ಎಲ್ಲವನ್ನು ಸಾಧಿಸಿಕೊಳ್ಳುತ್ತಾರೆ.ನಾನು ಹಣ, ಹೆಂಡಗಳ ಮೂಲಕ ಸ್ಪರ್ಧಿಸುತ್ತಿಲ್ಲ ನನ್ನ ಸಮಾಜಮುಖಿ ಕೆಲಸಗಳು ಇಷ್ಟವಾಗಿದ್ದರೆ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಕೆಲಸ ಮಾಡಬಲ್ಲೆ ಎನಿಸಿದರೆ, ನನ್ನನ್ನು ಬೆಂಬಲಿಸಿ.
ತಾಲ್ಲೂಕಿನಾಧ್ಯಂತ ಬಸ್ಸು ತಂಗುದಾನ. ನಮೂನೆ 53 ಅರ್ಜಿಯಲ್ಲಿ ಉಳಿದಿರುವ ನಮೂನೆ 57 ರಲ್ಲಿ ಸಲ್ಲಿಸಿರುವ ಜಾಗ ಮಂಜೂರು ಅರ್ಜಿಗಳನ್ನು ಒಂದೇ ವರ್ಷದಲ್ಲಿ ಕನಿಷ್ಠ 4.38 ಎಕರೆ ಜಾಗ ಮಂಜೂರು. ಕೂಲಿ ಕಾರ್ಮಿಕ ಕುಟುಂಬಕ್ಕೆ ಸೈಟ್ ನೀಡಿ ಮನೆ ನಿರ್ಮಾಣ. ಸರ್ಕಾರಿ ಆಸ್ಪತ್ರೆಗಳಿಗೆ ವೈಧ್ಯರು. ಹೋಬಳಿಗೊಂದು ಆಂಬ್ಯುಲೆನ್ಸ್. ಮುಖ್ಯ ರಸ್ತೆ ಮತ್ತು ಹಳ್ಳಿ ರಸ್ತೆಗಳ ಅಭಿವೃದ್ಧಿ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 95 ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ ವಿದ್ಯಾರ್ಥಿ ವೇತನ. ಮಂದಿರ, ಮಸೀದಿ, ಚರ್ಚ್ಗಳಿಗೆ ಮೂಲಭೂತ ಸೌಲಭ್ಯ. ಪ್ರತೀ ವರ್ಷ ಉದ್ಯೋಗ ಮೇಳ ಆಯೋಜನೆ. ಆಟೋ,ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ವಿತರಣೆ. ಅತಿವೃಷ್ಠಿ ಮತ್ತು ಅನಾವೃಷ್ಠಿ ಸಂದರ್ಭದಲ್ಲಿ ಸೂಕ್ತ ಪರಿಹಾರ ಮತ್ತು ಬೆಂಬಲ ಬೆಲೆ. ಪ್ರವಾಸಿತಾಣಗಳನ್ನು ಸ್ವಿಜ್ಜರ್ ಲ್ಯಾಂಡ್ ಮಾದರಿಯಲ್ಲಿ ಉನ್ನತ್ತೀಕರಿಸಿ ಜಾಗತಿಕ ಮಟ್ಟದಲ್ಲಿ ಮೂಡಿಗೆರೆ ಹೆಸರನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ ಎಂದು ತನ್ನ ಪ್ರಣಾಳಿಕೆಯನ್ನು ಮತದಾರರಿಗೆ ಕಹಳೆ ತಿಳಿಸಿದರು.