ಕಳಸ ಲೈವ್ ವರದಿ
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಪುನಃ ಪ್ರತಿಷ್ಠಾ ಸ್ವರ್ಣಮಹೋತ್ಸವ, ಬ್ರಹ್ಮಕುಂಭಾಭಿಷೇಕ ಮಹೋತ್ಸವವು ನಡೆಯುತ್ತಿದ್ದು, ಈ ಪುಣ್ಯ ಕಾರ್ಯಕ್ರಮಕ್ಕೆ ಕಳಸದ ಸಮಸ್ತ ಮುಸ್ಲಿಂ ಬಾಂಧವರ ಪರವಾಗಿ ಗುರುವಾರ ಹಸಿರುವಾಣಿ ಸಮರ್ಪಣೆ ಮಾಡಿದರು.
ಊರಿನ ಪ್ರಮುಖ ಮುಸ್ಲಿಂ ಬಾಂಧವರು ಅಕ್ಕಿ, ತರಕಾರಿ ಇನ್ನಿತರೆ ವಸ್ತುಗಳನ್ನು ವಾಹನದಲ್ಲಿ ಹೊರನಾಡು ಕ್ಷೇತ್ರಕ್ಕೆ ತಂದರು.ಅಲ್ಲಿ ದೇವಸ್ಥಾನದ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ನಂತರ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದು ಅನ್ನಪೂರ್ಣೇಶ್ವರಿಯ ಪ್ರಸಾದವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸೌಹಾರ್ದತೆಯನ್ನು ಮೆರೆದ ಕಳಸ ಮುಸ್ಲಿಂ ಬಾಂಧವರ ಪರವಾಗಿ ದೇವಸ್ಥಾನದ ಜಿ.ಭೀಮೇಶ್ವರ ಜೋಷಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.