ಕಳಸ ಲೈವ್ ವರದಿ
ಕಳಸ ತಾಲ್ಲೂಕಿಗೆ ಡಬಲ್ ಇಂಜಿನ್ ಸರ್ಕಾರದ ಯಶಸ್ಸು ಮುಟ್ಟಿಲ್ಲ ಅನ್ನುವ ಸ್ಪಷ್ಟವಾದ ನಿದರ್ಶನ ಇಲ್ಲಿಗೆ ಬೇಟಿ ನೀಡಿದಾಗ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮಂಗಳವಾರ ಬೆಳಿಗ್ಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಿ ದರ್ಶನ ಪಡೆದು ನಂತರ ಮೂಡಿಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಜೊತೆ ತಾಲ್ಲೂಕಿನ ಬಲಿಗೆ, ಕಾರಗದ್ದೆ, ಎಸ್.ಕೆ.ಮೇಗಲ್, ತೊಡ್ಲು, ನೂಜಿ, ಸಂಸೆ, ಜಾಂಬಳೆ, ನೆಲ್ಲಿಬೀಡು, ಹಳುವಳ್ಳಿ, ಮುಜೇಕಾನು ಪ್ರದೇಶದಲ್ಲಿ ಪ್ರವಾಸ ಮಾಡಿ ನಂತರ ಕಳಸ ಲೈವ್ ಜೊತೆ ಮಾತನಡಿದ ಅವರು, ಪಕ್ಷ ಕೊಟ್ಟ ಸೂಚನೆಯ ಪ್ರಕಾರ ದೀಪಕ್ ದೊಡ್ಡಯ್ಯವನರ ಪರ ಚುನಾವಣಾ ಪ್ರಚಾರ ಮಾಡಲು ಕಳಸ ತಾಲ್ಲೂಕಿಗೆ ಬಂದಿದ್ದೇನೆ.
ರಸ್ತೆ, ನೀರು, ನಿವೇಶನ ಸಮಸ್ಯೆಯಂತಹ ಮೂಲಭೂತ ಸಮಸ್ಯೆ ಇಲ್ಲಿ ನಿವಾರಣೆಯಾಗಿಲ್ಲ. ಇದು ಈ ಹಿಂದಿನ ಶಾಸಕ ನಿರ್ಲಕ್ಷ್ಯಕ್ಕೆ ಹಿಡಿದ ಕೈಗÀನ್ನಡಿಯಗಿದೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಪ್ರಗತಿಯಾಗುವಾಗ ಮೂಡಿಗೆರೆ ಕ್ಷೇತ್ರ ಯಾಕೆ ಪ್ರಗತಿಯಾಗಿಲ್ಲ ಅನ್ನುವ ಪ್ರಶ್ನೆ ಬರುತ್ತದೆ. ಕಳಸ ತಾಲ್ಲೂಕು ಕೇಂದ್ರವಾದರೂ ಕೂಡ ಇಲ್ಲಿ ಪೂರ್ಣ ಪ್ರಮಾಣದ ತಾಲ್ಲೂಕು ಕೇಂದ್ರವಾಗಲಿಲ್ಲ. ಬೇರೆ ಕಡೆ ಮಿನಿ ವಿಧಾನಸೌದ ಆಗಿ ಉದ್ಘಾಟನೆಯೂ ಆಗಿದೆ. ಸಿಗುವ ಅನುದಾನವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಕೂಡ ಈ ಹಿಂದಿನ ಶಾಸಕರು ಮಾಡಲಿಲ್ಲ. ಆದರಿಂದ ಈ ಬಾರಿ ಪಕ್ಷದ ತೀರ್ಮಾನದಂತೆ ದೀಪಕ್ ದೊಡ್ಡಯ್ಯನವರಿಗೆ ಪಕ್ಷ ಅವಕಾಶ ನೀಡಿದೆ ಎಂದರು.
ಮುಖಂಡರಾದ ಎಂ.ಎ. ಶೇಷಗಿರಿ, ನಾಗಭೂಷಣ್, ರಂಗನಾಥ್, ಕಾರ್ತಿಕ್ ಶಾಸ್ತ್ರಿ, ಬಿ.ಕೆ.ಮಹೇಶ್ ಇದ್ದರು.