ಕಳಸ ಲೈವ್ ವರದಿ
ಕಳಸ ಪಟ್ಟಣದ ಶ್ರೀಮತಿ ಜಯಂತಿ ಮತ್ತು ಕೆ.ವಾಸುದೇವ ಪೂಜಾರಿಯವರ ಪುತ್ರಿ ಕೆ.ವಿ ಆಧ್ಯಾ ಗೆ ದ್ವಿತೀಯ ಪಿಯುಸಿ ಪಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೆ ಸ್ಥಾನ ಪಡೆದು, ಕಾಲೇಜಿಗೆ ಎರಡನೆ ಸ್ಥಾನಪಡೆದಿದ್ದಾರೆ.
ಇವರು ಮಂಗಳೂರಿನ ಸೈಂಟ್ ಅಲೋಸಿಯಸ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, 600ಕ್ಕೆ 590 ಅಂಕ ಪಡೆದು 98.3% ಪಲಿತಾಂಶ ಪಡೆದಿದ್ದಾರೆ.
ಈ ಹಿಂದೆ ಕಳಸದ ಜೆಇಎಂ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಇವರು 10ನೇ ತರಗತಿಯಲ್ಲಿ 625 ಕ್ಕೆ 625 ಅಂಕವನ್ನು ಪಡೆದು ರಾಜ್ಯದಲ್ಲಿ ಮೊದಲನೆ ಸ್ಥಾನವನ್ನು ಪಡೆದಿದ್ದರು.
ಮಗಳ ಸಾಧನೆಯಿಂದ ಪೋಷಕರು ಹರ್ಷ ವ್ಯಕ್ತಪಡಿಸಿದ್ದು, ಕಳಸದ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.