ಕಳಸ ಲೈವ್ ವರದಿ
ಕಳಸ ತಾಲ್ಲೂಕಿನ ಕಲ್ಲಾಟಗುಡ್ಡ, ಕಚಗಾನೆಯ ದೈವರಾಜ ಭಗವಾನ್ ಶ್ರೀ ಬಬ್ಬುಸ್ವಾಮಿ ಮತ್ತು ಶ್ರೀ ಚಾಮುಂಡೇಶ್ವರಿ ಪರಿವಾರ ದೈವಗಳ ಎರಡನೇ ವರ್ಷದ ನೇಮೋತ್ಸವ ಶನಿವಾರ ಮತ್ತು ಭಾನುವಾರ ಶ್ರದ್ದಾಭಕ್ತಿಯಿಂದ ನಡೆಯಿತು.
ಶನಿವಾರ ಬೆಳಿಗ್ಗೆ ಕಂಬಿಗಾರ ದೇವರ ದರ್ಶನ ನಡೆಯಿತು ನಂತರ ಧ್ವಜಾರೋಹಣ, ಮಧ್ಯಾಹ್ನ ಚಪ್ಪರ ಏರುವ ಕಾರ್ಯಕ್ರಮದೊಂದಿಗೆ ಸಂಜೆ ದೈವಗಳ ಭಂಡಾರ ಇಳಿಯಿತು.ರಾತ್ರಿ ಶ್ರೀ ಬಬ್ಬುಸ್ವಾಮಿ ಹಾಗೂ ತನಿಮನಿಗ ದೈವದ ನೇಮೋತ್ಸವ ನಡೆಯಿತು.
ಭಾನುವಾರ ಮಧ್ಯಾಹ್ನ ಶ್ರೀ ಚಾಮುಂಡೇಶ್ವರಿ ಪರಿವಾರ ದೈವಗಳ ನೇಮೋತ್ಸವ. ಸಂಜೆ ಧೂಮವತಿ ಹಾಗೂ ಬಂಟ ದೈವದ ನೇಮೊತ್ಸವ ಅತ್ಯಂತ ವಿಜ್ರಂಭಣೆಯಿಂದ ನೆರವೇರಿತು.
ಎರಡು ದಿನ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ತಮ್ಮ ಕಷ್ಟ ಕಾಲಕ್ಕೆ ಹೇಳಿದ ಹರಕೆಯನ್ನು ತೀರಿಸಿ ಗಂಧ ಪ್ರಸಾಧವನ್ನು ಸ್ವೀಕರಿಸಿದರು.