ಕಳಸ ಲೈವ್ ವರದಿ
ಸಮರ್ಪಣ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಇವರ ವತಿಯಿಂದ ಕಳಸಕ್ಕೆ ಶವ ಸಂರಕ್ಷಣಾ ಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಿದ್ದು, ಇದನ್ನು ಸೋಮವಾರ ಕಳಸ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರ ಮಾಡಲಾಯಿತು.
ಕಳಸ ತಾಲ್ಲೂಕಿಗೆ ಶವ ಸಂರಕ್ಷಣಾ ಪೆಟ್ಟಿಗೆಯ ಅಗತ್ಯತೆಯನ್ನು ಗಮನಿಸಿದ ಕಳಸ ಪತ್ರಕರ್ತ ರವೀಂದ್ರ ಶೆಟ್ಟಿ ಅವರು ಸಮರ್ಪಣ ಚಾರಿಟೇಬಲ್ ಟ್ರಸ್ಟ್ಗೆ ಶವ ಸಂರಕ್ಷಣಾ ಪೆಟ್ಟಿಗೆಯನ್ನು ಕೊಡುವಂತೆ ಮನವಿಯನ್ನು ಮಾಡಿದ್ದರು. ಇದಕ್ಕೆ ಮನ್ನಣೆ ನೀಡಿದ ಟ್ರಸ್ಟ್ ಸುಮಾರು ಒಂದೂವರೆ ಲಕ್ಷ ರೂ ವೆಚ್ಚದ ಶವ ಸಂರಕ್ಷಣಾ ಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಪೆಟ್ಟಿಗೆಯು ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಇರಲಿದ್ದು, ಇದರ ನಿರ್ವಹಣೆಯನ್ನು ಕಳಸ ಮನ್ವಂತರ ತಂಡ ಮಾಡಲಿದೆ.ಅಲ್ಲದೆ ಇಲ್ಲಿಗೆ ಅಂಬ್ಯೂಲೆನ್ಸ್ನ ಅಗತ್ಯತೆಯ ಬಗ್ಗೆಯೂ ಟ್ರಸ್ಟ್ ನವರಿಗೆ ಮನವರಿಕೆಯನ್ನು ರವೀಂದ್ರ ಶೆಟ್ಟಿ ಮಾಡಿದರು.
ಈ ಸಂದರ್ಭದಲ್ಲಿ ಸಮರ್ಪಣ ಚಾರಿಟೇಬಲ್ ಟ್ರಸ್ಟ್ನ ಸಂಚಾಲಕಿ ದೀಪಾ ಶೆಟ್ಟಿ, ಕು.ರಮ್ಯಾ, ರಚನ್, ಆದರ್ಶ್, ಸಂದೀಪ್, ಕು. ಅವನಿ, ಪತ್ರಕರ್ತ ಸತೀಶ್ ಜೈನ್, ಕಳಸ ಪ್ರಥಮ ಧರ್ಜೆ ಕಾಲೇಜು ಪ್ರಾಂಶುಪಾಲ ವಿನಯ ಕುಮಾರ್ ಶೆಟ್ಟಿ, ಮನ್ವಂತರ ತಂಡದ ಅಧ್ಯಕ್ಷ ಹೆಚ್.ಆರ್. ಪ್ರಶಾಂತ್, ಅಜಿತ್ ಜೈನ್, ಶಿಕ್ಷಕರಾದ ಸತೀಶ್, ಉದಯ್ ಕುಮಾರ್ ಇದ್ದರು.