ಕಳಸ ಲೈವ್ ವರದಿ
ಕಳಸದ ಹಿನಾರಿ ಸಮೀಪ ಭಾನುವಾರ ಸಂಜೆ ಓಮಿನಿ ಕಾರು ಮತ್ತು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರ ಮೈದಾಡಿಯ ಲಕ್ಷ್ಮಣ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ಕಳಸ ಕಡೆಯಿಂದ ಮೈದಾಡಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಿಂದ ಹೊರನಾಡಿಗೆ ಬರುವ ಒಮಿನಿ ಕಾರಿಗೆ ಹಿನಾರಿ ಸಮೀಪ ಮುಖಾಮುಖಿ ಅಪಘಾತವಾಗಿದೆ.
ಅಪಘಾತದಲ್ಲಿ ಲಕ್ಷ್ಮಣ ಅವರ ತಲೆಗೆ ತೀವ್ರ ಸ್ವರೂಪದ ಏಟು ಬಿದ್ದು ರಸ್ತೆಯಲ್ಲಿದ್ದ ಅವರನ್ನು ಅದೇ ರಸ್ತೆಯಲ್ಲಿ ಬರುತ್ತಿದ್ದ ಕೆ.ಸಿ.ಮಹೇಶ, ಮಧು ಗೌಡ, ಅಶೋಕ್ ಚಿತ್ತಾರ ಗಾಯಾಳುವನ್ನು ತಕ್ಷಣ ತಮ್ಮ ಕಾರಿನಲ್ಲಿ ಕಳಸ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕ್ಕಿತ್ಸೆಗೆ ಮಂಗಳೂರುಗೆ ಕರೆದುಕೊಂಡು ಹೋಗಲಾಗಿದೆ.