ಕಳಸ ಲೈವ್ ವರದಿ
ಗುರುಗಳ ಆದರ್ಶಯುತ ಬದುಕೇ ಸಮಾಜಕ್ಕೆ ಮಹತ್ವ ಸಂದೇಶ, ಅವರು ಸದಾ ಕರ್ತವ್ಯ ಪ್ರಜ್ಞೆಯ ಬಗ್ಗೆ ಸಮಾಜವನ್ನು ಎಚ್ಚರಿಸುತ್ತಿದ್ದರು ಎಂದು ಕಳಸ ಪಟ್ಟಣದ ಬಸವ ಸಮಿತಿ ಗೌರವಾಧ್ಯಕ್ಷ ಸತ್ಯನಾರಾಯಣ ಹೇಳಿದರು.
ಪುಷ್ಪಗಿರಿ ಸಾಂಸ್ಕøತಿಕಪ್ರತಿಷ್ಠಾನ ಮತ್ತು ಬಸವ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಿದ್ದಗಂಗಾ ಮಠ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 116ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬರು ಅವರವರ ಕಾರ್ಯಕ್ಷೇತ್ರದ ಜವಾಬ್ದಾರಿ ಕರ್ತವ್ಯ ವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದರೆ ಯಾವ ವ್ಯವಸ್ಥೆಯು ಹದಗೆಡುವುದಿಲ್ಲ ಎಂದು ಹೇಳುತ್ತಿದ್ದರು ಎಂದರು..
ಕಳಸ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ಡಾ. ಸಿ.ಆರ್. ಮೋಹನ್ ಕುಮಾರ್ ಮಾತನಾಡಿ ಶಿವಕುಮಾರ ಸ್ವಾಮೀಜಿ ಗಳು ಸಕಲ ಜೀವ ರಾಶಿಗಳಿಗೂ ಲೇಸನ್ನೆ ಬಯಸಿದ ಅವರ ಬದುಕು ಮತ್ತು ಸಾಧನೆಗಳು ನಮಗೆ ಪ್ರೇರಣೆಯಾಗಿವೆ ಮಠ ಮಾನ್ಯ ಗಳು ಯಾವ ರೀತಿ ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎನ್ನುವುದನ್ನು ದೇಶಕ್ಕೆ ತಿಳಿಸಿ ಕೊಟ್ಟ ಶ್ರೇಯಸ್ಸು ಸಿದ್ದಗಂಗಾದ ಡಾ. ಶಿವಕುಮಾರ ಸ್ವಾಮೀಜಿಗೆ ಸಲ್ಲಬೇಕು ಹಾಗೂ ಇವರ ಸಾಮಾಜಿಕ ಸೇವೆ ಸ್ಮರಣಿಯ ಎಂದರು..
ಬಸವ ಸಮಿತಿ ಅಧ್ಯಕ್ಷ ಆನಂದ್ ಮಾತನಾಡಿ ಪೂಜ್ಯ ಗುರುಗಳು ಭೌತಿಕ ಅನುಪಸ್ಥಿತಿಯಲ್ಲಿ ಅವರ ಜನ್ಮದಿನೋತ್ಸವದ ಮೂಲಕ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಸ್ಮರಣೆಯನ್ನು ಪ್ರತಿ ನಿತ್ಯ ಮಾಡುತ್ತಿರುತ್ತೇವೆ ಅವರು ಭೌತಿಕವಾಗಿ ಜತೆಗಿಲ್ಲ ಆದರೆ ಯಾವತ್ತಿಗೂ ಭಾವನಾತ್ಮಕವಾಗಿ ನಮ್ಮೊಡನೆ ಇದ್ದೇ ಇರುತ್ತಾರೆ ಎಲ್ಲಾ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕೆಂದು ಬಯಸಿದ್ದರು. ಗ್ರಾಮೀಣ ಬಡ ಮಕ್ಕಳ ಉದ್ದಾರಕ್ಕೆ ಶತಾಯುಷಿ ಜೀವನ ಬಹುಪಾಲು ಮೀಸಲಿರಿಸಿ ದೊಡ್ಡ ಪವಾಡವನ್ನೇ ಮಾಡುತ್ತಿದ್ದರು ಎಂದರು.
ಮೂಡಿಗೆರೆ ತಾಲ್ಲೂಕು ವೀರಶೈವ ಲಿಂಗಾಯತ ಮಹಾಸಭಾ ನಿರ್ದೇಶಕ ಡಿ. ಕೆ. ರಾಜು, ಶಿಕ್ಷಕ ಪುನೀತ್ ಕುಮಾರ್, ಮುಖಂಡರಾದ ಶ್ರೀನಿವಾಸ್, ಶಿಕ್ಷಕರಾದ ಸರಸ್ವತಿ ಪಾಂಡುರಂಗ, ಸೀತಾರಾಮ್, ಶ್ರೀವತ್ಸ, ರೂಪ, ಜಯಲಕ್ಷ್ಮಿ, ಭಾರತಿ, ಹರ್ಷಿತ, ಸುಮಾ, ನಳಿನಾ, ಮಾಲಾ ಜಿ ರಾವ್, ಕುಸುಮ, ಪವಿತ್ರ, ಚೈತ್ರ, ಗಮನ ಇದ್ದರು.