ಕಳಸ ಲೈವ್ ವರದಿ
ಶಿಲಾಮಯವಾಗಿ ಪುನರ್ನಿರ್ಮಾಣ ಆಗುತ್ತಿರುವ ಕಳಸ ಚಂದ್ರನಾಥ ಸ್ವಾಮಿ ಬಸದಿಯ ಮುಂಭಾಗ 32 ಅಡಿ ಎತ್ತರದ ಭಾರಿ ಗಾತ್ರದ ಮಾನಸ್ತಂಭದ ನಿರ್ಮಾಣಕ್ಕೆ ದೊಡ್ಡ ಗಾತ್ರದ ಶಿಲೆ ಬುಧವಾರ ಕಳಸ ಚಂದ್ರನಾಥ ಸ್ವಾಮಿ ಬಸದಿಗೆ ಆಗಮಿಸಿತು.
27 ಅಡಿ ಉದ್ದದ ಏಕಶಿಲೆಯನ್ನು ಚಿಕ್ಕಬಳ್ಳಾಪುರದಿಂದ ಕಳಸಕ್ಕೆ ತರಲಾಗಿದೆ. ಈ ಬೃಹತ್ ಶಿಲೆಗೆ ಮಹಾವೀರ ವೃತ್ತದ ಬಳಿ ಜೈನ ಬಾಂಧವರು ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಚಂದ್ರನಾಥ ಬಸದಿವರೆಗೆ ಕೊಂಡೊಯ್ದರು.
ಕಳಕೋಡು ಮೂಲದವರಾದ ಮಹಿಮಾ ಸಾಗರ ಮುನಿಗಳು ಈ ಮಾನಸ್ತಂಭಕ್ಕೆ ಬೇಕಾದ 16 ಲಕ್ಷ ರೂಪಾಯಿ ಮೊತ್ತವನ್ನು ಒದಗಿಸುತ್ತಿದ್ದಾರೆ.ಈಗಾಗಲೇ 8 ಲಕ್ಷ ರುಪಾಯಿ ದೇಣಿಗೆ ಅವರು ನೀಡಿದ್ದು ಮಾನಸ್ತಂಭದ ಕೆಲಸ ಸದ್ಯದಲ್ಲೇ ಆರಂಭವಾಗಲಿದೆ.
‘ಶಿವಮೊಗ್ಗ ಜಿಲ್ಲೆ ಮೇಳಿಗೆಯ ಪುರಾತನ ಬಸದಿಯ ಮಾನಸ್ತಂಭದ ಬಗೆಯಲ್ಲೇ ಕಳಸದ ಮಾನಸ್ತಂಭದ ಕೆಲಸವೂ ನಡೆಯಲಿದೆ.27 ಅಡಿ ಮಾನಸ್ತಂಭದ ಮೇಲೆ 5 ಅಡಿ ಎತ್ತರದ ಮಂಟಪವನ್ನು ಇರಿಸಲಾಗುತ್ತದೆ.ಇದು ಅತ್ಯಂತ ವಿಶಿಷ್ಟ ಬಗೆಯ ಮಾನಸ್ತಂಭ ಆಗಲಿದೆ’ ಎಂದು ಚಂದ್ರನಾಥ ಸ್ವಾಮಿ ಬಸದಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಸಿ.ಧರಣೇಂದ್ರ ತಿಳಿಸಿದ್ದಾರೆ.